ಮಾಧವಿ ಭಂಢಾರಿ ಕೆರೆಕೋಣ ಇವರು ಸಂಪಾದಿಸಿರುವ ನೀನುಂಟು ನಿನ್ನ ರೆಕ್ಕೆಗಳುಂಟು ಎಂಬ ಈ ಕವನ ಸಂಗ್ರಹ ಹಲವು ಕಾರಣಗಳಿಗಾಗಿ ವಿಶಿಷ್ಟವೂ ಗಮನಾರ್ಹವೂ ಆಗಿದೆ. ಈ ಸಂಕಲನದಲ್ಲಿ ಅವರು 48 ಕವಯತ್ರಿಯರ 72 ಕವನಗಳನ್ನು ಹೆಣೆದಿದ್ದಾರೆ. ಎಂದರೆ ಕನ್ನಡದ ಕವಯತ್ರಿಯರು ಈ ಒಂದು ದಶಕದಲ್ಲಿ ಚಿಂತಿಸಿಸಿರುವ, ಪ್ರತಿಕ್ರಿಯಿಸಿರುವ ಸಂಗತಿಗಳನ್ನು ಅರಿಯಲು ಇದೊಂದು ಕನ್ನಡಿಯಾಗಿ ನಿಂತಿದೆ.
ಕೃತಿಯ ಪರಿವಿಡಿಯಲ್ಲಿ ಭಾಗೀರಥಿ ಹಗಡೆ ಅವರ ರಾಮರಾಜ್ಯ, ಸುಕನ್ಯಾ ಮಾರುತಿ ಅವರ ಅಸ್ಮಿತೆ, ಎಚ್. ಎಲ್ ಪುಷ್ಪ ಅವರ ದೋಪ್ದಿ ಹಾಗೂ ಹೆಜ್ಜೆಗಳು, ಸುಕನ್ಯಾ ಮಾರುತಿ ಅವರ ಅಗ್ನಿಪುತ್ರಿ, ಎಮ್ ಆರ್ ಕಮಲ ಅವರ ಸಂಕುಲೋಪಾಖ್ಯಾನ, ಎಸ್. ಅರುಂಧತಿ ಅವರ ನಡೆದು ಬಂದ ದಾರಿ, ಎಸ್. ವಿ ಪ್ರಭಾವತಿ ಅವರ ಮೆಟ್ಟಿಲುಗಳು ಹೀಗೆ ಅನೇಕ ಕವನಗಳಿವೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಬಂಡಾಯ ಸಾಹಿತಿ ಡಾ. ಆರ್. ವಿ. ಭಂಡಾರಿ ಹಾಗೂ ಸುಬ್ಬಿ ದಂಪತಿಗಳ ಮಗಳಾಗಿ 1962 ರಲ್ಲಿ ಜನನ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿ ಈಗ ವಿಶ್ರಾಂತ ಜೀವನ. ಪುಸ್ತಕಗಳು: 'ಹರಿದ ಸ್ಕರ್ಟಿನ ಹುಡುಗಿ', 'ಕಡಲು ಕಳೆದಿದೆ', 'ಮೌನ ಗರ್ಭದ ಒಡಲು' (ಕವನ ಸಂಕಲನ), 'ನೀನುಂಟು ನಿನ್ನ ರೆಕ್ಕೆ ಉಂಟು' (ಸಂಪಾದಿತ ದಶಕದ ಮಹಿಳಾ ಕಾವ್ಯ), 'ಆಗೇರ ಮಹಿಳಾ ಸಂಸ್ಕೃತಿ' (ಸಾಹಿತ್ಯ ಅಕಾಡೆಮಿ ಪ್ರಕಟಣೆ), 'ಪಿಸು ದನಿ' (ಲೇಖನ ಸಂಕಲನ), 'ಗುಲಾಬಿ ಕಂಪಿನ ರಸ್ತೆ'(ಕಥಾ ...
READ MORE