ವಿ.ಸೀ. ಅವರ ಬೆಲೆಬಾಳುವ ಬರಹಗಳು-ವಿಮರ್ಶಕ ಜಿ.ಎಸ್. ಆಮೂರ ಅವರ ಕೃತಿ. ಹೆಸರಾಂತ ಸಾಹಿತಿ ವಿ.ಸೀ. ಅವರ ಓದಿನ ಆಳ, ವಿಸ್ತಾರ, ವೈವಿಧ್ಯತೆಗಳು ಅಗಾಧ. ಚಿತ್ರಕಲೆ, ಸಂಗೀತ, ಶಿಲ್ಪ, ಸಾಹಿತ್ಯ, ಜ್ಞಾನ-ವಿಜ್ಞಾನ, ಕಾವ್ಯ, ನಾಟಕ, ಪ್ರಬಂಧ, ವ್ಯಕ್ತಿಚಿತ್ರಗಳು, ವಿಮರ್ಶೆ, ಶಾಸ್ತ್ರ, ಅನುವಾದ ಹೀಗೆ ಬಹುಮುಖೀಯ ಆಸಕ್ತಿ. ವಿ.ಸೀ.ಯವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು ಅಪಾರವಾಗಿದ್ದು, ಅವುಗಳ ಶಾಸ್ತ್ರೀಯ ಅಧ್ಯಯನದ ಮುಂದುವರಿಕೆಯಾಗಿ ವಿಮರ್ಶಕ ಜಿ.ಎಸ್. ಆಮೂರ ಅವರು ಶೋಧಿಸಿದ್ದೇ ಈ ಕೃತಿ.
ಪುಸ್ತಕದ ಪ್ರಸ್ತಾವನೆಯಲ್ಲಿ ಸ್ವತಃ ವಿಮರ್ಶಕ ಜಿ.ಎಸ್. ಆಮೂರ ಹೇಳುವಂತೆ ‘ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವಿ.ಸೀ. ಅವರ ಅವರ ಸ್ಥಾನ ಅನಿರ್ದಿಷ್ಟವಾಗಿಯೇ ಉಳಿದಿದೆ. ಇದಕ್ಕೆ ಕಾರಣಗಳನ್ನು ಶೋಧಿಸುವಲ್ಲಿ ನನ್ನ ಶಕ್ತಿಯನ್ನು ವಿನಿಯೋಗಿಸುವ ಬದಲು ಇಂದಿಗೂ ಪ್ರಸ್ತುತವೆನಿಸುವ ಅವರ ಬರಹಗಳನ್ನು ಸಂಕಲಿಸಿ ಓದುಗರನ್ನು ಪ್ರಭಾವಿಸಲೆತ್ನಿಸುವುದು ನನಗೆ ಸೂಕ್ತವಾಗಿ ಕಂಡಿತು. ಹೀಗಾಗಿ ಈ ಸಂಕಲನ ನಿಮ್ಮೆದುರಿಗಿದೆ’ ಎಂದು ವಿ.ಸೀ. ಅವರ ಸಾಹಿತ್ಯಕ ಎತ್ತರವನ್ನು ಹಾಗೂ ಅಂತಹ ಮೇರು ವ್ಯಕ್ತಿತ್ವವನ್ನು ತಿಳಿಸುವ ತಮ್ಮ ಸಣ್ಣ ಪ್ರಯತ್ನ ಎಂಬುದಾಗಿ ಹೇಳಿಕೊಂಡಿದ್ದಾರೆ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE