‘ಸಾಹಿತ್ಯ ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ’ ಹಿರಿಯ ಲೇಖಕ ಎಂ.ಎಚ್. ಕೃಷ್ಣಯ್ಯ ಅವರು ಸಂಪಾದಿಸಿರುವ ಕೃತಿ. ಇಲ್ಲಿ ಕನ್ನಡದ ಬಹುಮುಖ್ಯ ಸಾಹಿತಿಗಳು ಸಾಹಿತ್ಯದಿಂದಾದ ಪರಿವರ್ತನೆ ಮತ್ತು ಪ್ರಗತಿಯ ಕುರಿತಾಗಿ ಬರೆದಿರುವ ಮಹತ್ವದ ಲೇಖನಗಳು ಸಂಕಲನಗೊಂಡಿವೆ.
ಡಾ.ಜಿ.ಎಸ್. ಶಿವರುದ್ರಪ್ಪ ಅವರ ಸಾಹಿತ್ಯ: ಪರಿವರ್ತನೆ ಮತ್ತು ಪ್ರಗತಿ, ಶ್ರೀಮತಿ ಮಾಯಾರಾವ್ ಅವರ ನೃತ್ಯ ಮತ್ತು ಸಂಗೀತ: ಪರಿವರ್ತನೆ ಮತ್ತು ಪ್ರಗತಿ, ಆರ್. ಎಂ. ಹಡಪದ್ ಅವರ ಕರ್ನಾಟಕ ಲಲಿತಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ, ಪರ್ವತ ರಾಣಿ ಅವರ ಕರ್ನಾಟಕ ನಾಟಕ ಭವಿಷ್ಯ, ಎಂ.ಎಚ್. ಕೃಷ್ಣಯ್ಯ ಅವರ ಘರಾಣಾ ಪದ್ಧತಿಗಳು: ಒಂದು ಕಲಾತ್ಮಕ ವಿವೇಚನೆ ಸೇರಿದಂತೆ ಹಲವು ಮಹತ್ವದ ಲೇಖನಗಳು ಸಂಕಲನಗೊಂಡಿವೆ.
ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...
READ MORE