‘ಬೀದರ ಜಿಲ್ಲೆಯ ಅನುಭಾವಿ ಕವಿಗಳು’ ಲೇಖಕ ಡಾ.ಬಸವರಾಜ ಸಬರದ ಅವರ ಕೃತಿ. ಈ ಕೃತಿಗೆ ಡಾ. ಚೆನ್ನಣ್ಣ ವಾಲೀಕಾರ. ಬೀದರ ಜಿಲ್ಲೆಯ ಮೂವತ್ತೊಂದು ಅನುಭಾವಿ ಕವಿಗಳ ಪರಿಚಯದೊಂದಿಗೆ ಅವರು ರಚಿಸಿರುವ ಕೆಲವು ಪ್ರಾತಿನಿಧಿಕ ತತ್ವಪದಗಳನ್ನೂ ಅನುಬಂಧದಲ್ಲಿ ಕೊಟ್ಟಿದ್ದಾರೆ. ಕಲೆ ಮತ್ತು ಕಾಳಜಿ ಈ ಎರಡೂ ನೆಲೆಗಳನ್ನು ಹೊಂದಿರುವ ಡಾ. ಬಸವರಾಜ ಸಬರದ ಅವರು ಈ ಕೃತಿಗೆ ಅತ್ಯುತ್ತಮವಾದ ಪ್ರಸ್ತಾವನೆ ಬರೆದು ಮಹತ್ವದ ಅನುಬಂಧ ನೀಡಿದ್ದಾರೆ. ಇಲ್ಲೆಲ್ಲಾ ಸಂಶೋಧನೆಯ ಶ್ರಮ ಎದ್ದು ಕಾಣುತ್ತಿದ್ದು ಈ ಕೃತಿ ಮುಂದಿನ ಸಂಶೋಧಕರಿಗೆ ಊರುಗೋಲಾಗುತ್ತದೆ ಎಂದಿದ್ದಾರೆ ಚೆನ್ನಣ್ಣ ವಾಲೀಕಾರ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE