ಶಾ ಮಂ ಕೃಷ್ಣರಾಯ ಅವರ ಕೃತಿ ರಸಚೇತನ. ಅನಕೃ ಅವರಿಗೆ 60 ವಯಸ್ಸು ತುಂಬಿದಾಗ ಮತ್ತು ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಾಗ ಹೊರಬಂದ ಪುಸ್ತಕವಿದು. ಪುಸ್ತಕದಲ್ಲಿ ಸಾಹಿತಿಗಳು, ರಾಜಕಾರಣಿಗಳು ಅನಕೃ ಅವರ ಬಗ್ಗೆ ಬರೆದಿದ್ದಾರೆ. ಲೇಖನ ಶುರುವಾಗುವುದೇ ತರಾಸು ಅವರಿಂದ. ಪ್ರಿಯಶಿಷ್ಯ ಪ್ರಾರಂಭ ಮಾಡುವುದಲ್ಲದೆ ಮತ್ತಾರು ಮಾಡಲು ಸಾಧ್ಯ! ಅದೇ ರೀತಿ ಸಾಹಿತಿಗಳಾದ ನಿರಂಜನ, ನಾಡಿಗೇರ ಕೃಷ್ಣರಾಯ, ರಾಶಿ, ಕೃಷ್ಣಮೂರ್ತಿ ಪುರಾಣಿಕ, ಬೀchi, ಕೀರ್ತಿನಾಥ ಕುರ್ತಕೋಟಿ ಹೀಗೆ ಹಲವು ಲೇಖಕರು ಬರೆದಿದ್ದಾರೆ. ಪ್ರತಿ ಲೇಖನ ಕಂಡಾಗ ಅನಕೃ ಅವರ ಮೇಲಿನ ಪ್ರೀತಿ, ಗೌರವ ಇಮ್ಮಡಿಗೊಳ್ಳುತ್ತದೆ. ಕನ್ನಡಕ್ಕಾಗಿ ಅವರು ತಮ್ಮ ಜೀವನವನ್ನೇ ಮೂಡುಪಾಗಿಟ್ಟವರು. ಯುವಸಾಹಿತಿಗಳಿಗೆ ತಮ್ಮ ಅಭಯಹಸ್ತ ನೀಡಿ ಅವರನ್ನು ಮೇಲೆತ್ತಿದವರು.
ಶಾ.ಮಂ. ಕೃಷ್ಣರಾವ್ ಮೂಲತಃ ಬೆಳಗಾವಿಯವರು. ತಂದೆ- ಮಂಜುನಾಥ ಶ್ಯಾನಭಾಗ, ತಾಯಿ- ಗಂಗಾದೇವಿ. ಪ್ರಾಥಮಿಕ -ಪ್ರೌಢಶಿಕ್ಷಣವನ್ನು ಸಿದ್ಧಾಪುರದಲ್ಲಿಪಡೆದರು. ಉದ್ಯೋಗದ ನಿಮಿತ್ತ ತಂದೆಯವರು ಗೋವಾಗೆ ವಾಸ್ತವ್ಯ ಬದಲಿಸಿದ್ದರಿಂದ ಇವರ ಕಾಲೇಜು ಶಿಕ್ಷಣ ಗೋವಾದಲ್ಲಿ ಮುಂದುವರೆಯಿತು. ಸಿದ್ದಾಪುರ ತಾಲೂಕಿನ ಅಳವಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು. ಬಾಹ್ಯವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ, ಬಿ.ಎಡ್ ಪದವಿ ಪೂರ್ಣಗೊಳಿಸಿದರು. ಗೋವಾದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ಸೇರಿ ಜ್ಯೂನಿಯರ್ ಕಾಲೇಜು ಮಟ್ಟದ ತರಗತಿಗಳಿಗೂ ಬೋಧಿಸಿ, 41 ವರ್ಷಗಳ ಸೇವೆಯ ನಂತರ ನಿವೃತ್ತಿಯಾದರು. ಗೋವಾದಲ್ಲಿ ಕನ್ನಡ ಕಟ್ಟುವ ಕೆಲಸವನ್ನು ಒಂದು ದೀಕ್ಷೆ ಎಂಬಂತೆ ಸ್ವೀಕರಿಸಿದ್ದು, ಅಲ್ಲಿದ್ದ ಕೇವಲ 813 ಕನ್ನಡಿಗರಿಗೆ (1961 ಜನಗಣತಿ ...
READ MORE