ಕವಿ ಎ.ಎಸ್. ಮಕಾನದಾರ ಅವರ ಶರಣ-ಸೂಫಿ-ವಚನಗಳ ಸಂಪಾದಿತ ಕೃತಿ-ಸಮರಸ ತಾಂಬೂಲ. ಸಮರಸ ತಾಂಬೂಲ ಕಲಕೇರಿಯ ಮಕಾನದಾರ ಬಂಧುಗಳಾದ ಶ್ರೀಮತಿ ದಿಲ್ ಶಾದ ಬೇಗಂ ಶ್ರೀ ಅಲ್ಲಾ ಬಕ್ಷಮಕಾನದಾರ ದಂಪತಿಗಳ ಮಗ ಬರಹಗಾರ ನೂರ್ ಅಹ್ಮದ್- ಕವಯಿತ್ರಿ ರಜಿಯಾ ಬೇಗಂ ಅವರ ವಿವಾಹ ಮಹೋತ್ಸವ ದ ನೆನಪಿಗಾಗಿ ಸಾಹಿತಿ ಎ ಎಸ್. ಮಕಾನದಾರ ಅವರ ಸಂಪಾದನೆ ಯಲ್ಲಿ ‘ಸಮರಸ ತಾಂಬೂಲ’ ಕೃತಿ ಪ್ರಕಟಿಸಲಾಗಿದೆ. ಕಲ್ಯಾಣ ಮಹೋತ್ಸವ ದಂತಹ ಸಂದರ್ಭದಲ್ಲಿ ವಚನ ತಾಂಬೂಲ ಪ್ರಕಟಿಸಿ ಅತಿಥಿ ಗಳಿಗೆ ಹಂಚುವ ಪರಿಪಾಠವಿತ್ತು ಎಂಬುದಕ್ಕೂ ಸಂಪ್ರದಾಯಿಕ ಇತಿಹಾಸವಿದೆ. ಅಹ್ಮದ್. ಮಕಾನದಾರ. ಪ್ರಕಾಶಕ ಫಾರೂಕ್ ಎ ಮಕಾನದಾರ. ಸಾಹಿತಿ ಎ ಎಸ್. ಮಕಾನದಾರರ ಕನಸುಗಳು ಈ ಮೂಲಕ ಸಾಕಾರಗೊಂಡಂತಾಗಿದೆ. ಬಾಬಾ ತಾಹೀರ್, ಸನಾಯಿ, ಬಾಬಾ ಶೇಖ್ ಫರೀದ್, ಲಲ್ಲಾ ಆರಿಫಾ, ರಾಬಿಯಾ, ಅಲ್ಹ್ ಜ್ ಮನ್ಸೂರ್, ರೂಮಿ ಮುಂತಾದವರ ಸೂಫಿ ಕಾವ್ಯ, ಅಲ್ಲಮ ಪ್ರಭು. ಚನ್ನಬಸವಣ್ಣ, ನೀಲಾಂಬಿಕೆ, ಗಂಗಾಂಬಿಕೆ,ನಾಗಲಾಂಬಿಕೆ , ಉರಿಲಿಂಗ ಪೆದ್ದಿ, ಆಯ್ದಕ್ಕಿ ಮಾರಯ್ಯ, ಮುಂತಾದವರ ವಚನಗಳಿವೆ. ಅಲ್ಲದೇ, ಮಾಜಿ ಶಾಸಕ ಎಸ್ ಎಸ್. ಪಾಟೀಲ್. ಪ್ರೂ. ಕೆ ಬಿ ಕರಿ ಭರಮ ಗೌಡರ, ವಿಶಾಲ ಸಂಗಣ್ಣವರ ಎ ಎಸ್. ಮಕಾನದಾರ ಫಾರೂಕ್ ಮಕಾನದಾರ ಮುಂತಾದವರ ಅಕ್ಷರ ತಾಂಬೂಲ ಓದಿಯೇ ಸೂಫಿ ಶರಣ ವಚನಗಳ ರಸ ಗವಳ ಆಸ್ವಾದಿಸಬೇಕು ಎಂಬುದು ಸಂಪಾದಕರ ಆಶಯ. ಗೌರವದ ಕಾಣಿಕೆಯೇ ಈ ಕೃತಿಯ ಬೆಲೆ ಎಂದು ಪ್ರಕಾಶಕರು ತಿಳಿಸುತ್ತಾರೆ.
ಲೇಖಕ ಎ. ಎಸ್. ಮಕಾನದಾರ ಅವರ ಹುಟ್ಟೂರು ಗಜೇಂದ್ರಗಡ. ಪ್ರಸ್ತುತ ಗದುಗಿನ ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 10 ಸ್ವತಂತ್ರ ಕೃತಿಗಳನ್ನು, 16 ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎಸ್.ಡಬ್ಲೂ ಮೊದಲ ಸೆಮಿಸ್ಟರ್ ಗೆ ‘ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ’ ಎಂಬ ಇವರ ಕವಿತೆ ಪಠ್ಯ ವಾಗಿ ಸೇರ್ಪಡೆ ಯಾಗಿದೆ. ಪ್ರಶಸ್ತಿ-ಗೌರವಗಳು: ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪುರಸ್ಕಾರ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ, ಸಂತ ಶಿಶುನಾಳ ಶರೀಫ ಪುರಸ್ಕಾರ, ಭಾವೈಕ್ಯ ಪುರಸ್ಕಾರ, ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ, ಕೊಪಳ ...
READ MORE