ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು ತಮ್ಮ ಜೀವನವನ್ನು ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳಿಗಾಗಿ ಮುಡಿಪಾಗಿಟ್ಟ ದಿ. ಸುಬ್ರಾಯ ಹಕ್ಕಿಮನೆಯವರ ಕುರಿತಾಗಿ ಶೈಕ್ಷಣಿಕ ಪ್ರೇಮಿಗಳು, ವಿದ್ಯಾರ್ಥಿಗಳು, ಹಿತೈಷಿಗಳು ಬರೆದ ಲೇಖನಗಳನ್ನು ಶೋಭಾ ನಾಯಕ ಅವರು ಸಂಪಾದಿಸಿದ ಕೃತಿ-ದಾರಿ ದೀಪ. ಈ ಕೃತಿಯ ಓದುಗರಿಗೆ ಉಚಿತವಾಗಿ ತಲುಪಿಸುವ ಉದ್ದೇಶದೊಂದಿಗೆ ಲೇಖಕಿ ಹಾಗೂ ಪ್ರಕಾಶಕರು ಕೃತಿಯ ಬೆಲೆಯನ್ನು ನಮೂದಿಸಿಲ್ಲ.
ಇಲ್ಲಿ ಪ್ರಕಟಿತ ಎಲ್ಲ ಬರಹಗಳು ದಿ. ಸುಬ್ರಾಯ ಹಕ್ಕಿಮನೆ ಅವರ ಶೈಕ್ಷಣಿಕ ಹಾಗೂ ಸಾಮಾಜಿಕ ಕಳಕಳಿ ಮತ್ತು ಅವರ ಇಡೀ ವ್ಯಕ್ತಿತ್ವದ ದರ್ಶನ ಮಾಡಿಸುತ್ತವೆ.
ಶೋಭಾ ನಾಯಕ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿದರು. ಕಂಪ್ಯೂಟರ್ ಸಾಯನ್ಸ್ ಡಿಪ್ಲೊಮಾ ಆಂಡ್ ಇಂಜನಿಯರಿಂಗ್, ಪಿ.ಜಿ.ಡಿಪ್ಲೊಮಾ ಇನ್ ಜೈನಾಲಾಜಿ ಹಾಗೂ ಆರು ಸುವರ್ಣ ಪದಕಗಳೊಂದಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಎಂ.ಫಿಲ್ ಹಾಗೂ ಪಿಹೆಚ್. ಡಿ. ಪದವಿಗಳನ್ನು ಪೂರೈಸಿದ ಇವರು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರಕಲೆ ಹಾಗೂ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ...
READ MORE