ಲೇಖಕಿ ಬಿ.ಎಸ್. ಶೈಲಜಾ ಅವರ ಸಂಪಾದಿತ ಕೃತಿ-ಬಾನಿಗೊಂದು ಕೈಪಿಡಿ. ಹೊಸತು ಪತ್ರಿಕೆಯು ತನ್ನ ಆರಂಭದ ಐದು ವರ್ಷಗಳ ಅವಧಿಯಲ್ಲಿ 60 ಸಂಚಿಕೆಗಳಿದ್ದು., ವೈವಿಧ್ಯಮಯ ಲೇಖನಗಳಿವೆ. ಹದಿನೆಂಟು ಸಂಪುಟಗಳಲ್ಲಿ ಹೊಸತು ವಾಚಿಕೆ ರೂಪದಲ್ಲಿ ಓದುಗರಿಗೆ ನವಕರ್ನಾಟಕ ನೀಡುತ್ತಿದೆ. ಆ ಪ್ರಕ್ರಿಯೆಯಲ್ಲಿ ‘ಬಾನಿಗೊಂದು ಕೈಪಿಡಿ ಸಹ ಒಂದು.
ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್. ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...
READ MORE