ಕವಿ ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಬುದ್ಧಚರಣ ಕಾವ್ಯ ಕುರಿತ ಲೇಖನಗಳ ಸಂಪುಟ ಇದು. ಹಿರಿಯ ವಿದ್ವಾಂಸರಾದ ಮಲ್ಲೇಪುರಂ ಜಿ ವೆಂಕಟೇಶ ಅವರು ಇದರ ಪ್ರಧಾನ ಸಂಪಾದಕರಾಗಿದ್ದು, ಮಾಲಿನಿ ಗುರುಪ್ರಸನ್ನ, ಸಿಂಧು ರಾವ್ ಟಿ ಸಂಪಾದಕರಾಗಿದ್ದಾರೆ. ವೆಂಕಟೇಶಮೂರ್ತಿ ಅವರ ಬುದ್ಧ ಚರಣ ಕಾವ್ಯದ ಕುರಿತು ಬೆನ್ನುಡಿಯಲ್ಲಿ ಬಿ.ಎ.ವಿವೇಕ ರೈ ಅವರು ಬರೆಯುತ್ತಾ, ಬುದ್ಧನನ್ನು ಪೂರ್ಣವಾಗಿ ದರ್ಶಿಸಲು ಸಾಧ್ಯವಾಯಿತು ಎಂದಿದ್ದಾರೆ. ಇಲ್ಲಿ ನಾವು ಓದುಗರಾಗಿ ಕೇವಲ ಕಾವ್ಯದ ಹೊರಗೆ ಉಳಿಯುವುದಿಲ್ಲ. ನಾವೆಲ್ಲ ಶ್ರವಣಭಿಕ್ಕುಗಳಾಗಿ ಬಿಡುತ್ತೇವೆ. ಬುದ್ಧಚರಣವು ಬುದ್ಧಮೀಮಾಂಸೆಯನ್ನು ಹೃದ್ಗತ ಮಾಡಿಸಿದ ಮಹಾಕಾವ್ಯ ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ. ಕವಿ ವೆಂಕಟೇಶಮೂರ್ತಿಯವರ ನಿಡುಗಾಲದ ಕಾವ್ಯ ವಿಲಾಸವು ಒಂದು ಅಖಂಡ ತತ್ಪರ ಉಪಾಸನೆಯೇ ಆಗಿದೆ ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದ್ದಾರೆ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ್ಯಾಂಕಿನೊಡನೆ ಕುವೆಂಪು ಚಿನ್ನದ ...
READ MORE