ಹಿರಿಯ ಪತ್ರಕರ್ತ ಹಾಗೂ ಲೇಖಕ ಶಿಕಾರಿಪುರ ಈಶ್ವರ ಭಟ್ ಅವರ ಎರಡನೇ ಕೃತಿ ಮಹಾಭಾರತ ಪಾತ್ರಾನುಸಂಧಾನ. ಈ ಕೃತಿಯ ಸಂಗ್ರಾಹಕರು ಹಾಗೂ ಲೇಖಕರಾಗಿ ಈಶ್ವರ ಭಟ್ ಅವರು ಕಾರ್ಯ ನಿರ್ವಹಿಸಿದ್ದಾರೆ. ಹಿರಿಯ ಪತ್ರಕರ್ತರು ದು.ಗು.ಲಕ್ಷ್ಮಣ ಅವರು ಕೃತಿಯಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಬನ್ನಂಜೆ ಗೋವಿಂದಾಚಾರ್ಯರ ಮಹಾಬಾರತ ಕುರಿತ ಪ್ರವಚನಗಳನ್ನು ಲೇಖನಗಳನ್ನಾಗಿಸಿ, ಅದನ್ನೀಗ ‘ಮಹಾಭಾರತ ಪಾತ್ರಾನುಸಂಧಾನ’ ವನ್ನಾಗಿಸಿ, ಕೃತಿರೂಪಕ್ಕಿಳಿಸಿರುವುದು ಮೆಚ್ಚುಗೆ ವಿಚಾರ ಎಂಬುದಾಗಿ ಹೇಳಿದ್ದಾರೆ. ಕೃತಿಯ ಪರಿವಿಡಿಯಲ್ಲಿ ಬನ್ನಂಜೆ: ನಮುಡಿನಮನ-ಅಕ್ಷರಾಂಜಲಿ, ಪ್ರವಚನ-”ಅನುಸಂಧಾನ” ವಾದ ಬಗೆ…, ಮಹಾಭಾರತ: ಸುತ್ತ-ಮುತ್ತ…, ಬೆಸ್ತಕುಲ ಸಂಜಾತ “ವೇದವ್ಯಾಸ”, ಶ್ರೀಕೃಷ್ಣನ ದ್ವಾರಕಾ ಉತ್ಖನನ…, ಧೀರ ಮಹಿಳೆ-ವೀರ ಮಾತೆಕುಂತಿ, ದುರಂತ ನಾಯಕಿ:ಮಾದ್ರಿ, ಪತಿವ್ರತಾ- ಸತ್ಯವಾದಿನಿ: ಗಾಂಧಾರಿ, ವಿದುರ ಗೀತ-ಹಿತೋಪದೇಶ, ವಿದುರ ನೀತಿ-ಸಂಖ್ಯಾರ್ಥ ಚಿಂತನ ಸೇರಿದಂತೆ ಅನೇಕ ಶೀರ್ಷಿಕೆಗಳ ಲೇಖನಗಳಿವೆ.
ಶಿಕಾರಿಪುರ ಈಶ್ವರ ಭಟ್ಟರು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ವೃತ್ತಿಯಿಂದ ಶಿಕ್ಷಕರು, ಪ್ರವೃತ್ತಿಯಿಂದ ಪತ್ರಕರ್ತರು ಮತ್ತು ಲೇಖಕ, ಸಂಘಟಕ ಕಾರ್ಯಕರ್ತರು. ಸುಮಾರು ಮೂವತ್ತು ವರ್ಷಗಳ ಕಾಲ ಶಿಕಾರಿಪುರ, ಉಡುಪಿ, ಉದ್ಯಾವರ ಮತ್ತು ಮೂಡುಬಿದಿರೆ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, 2021ರಲ್ಲಿ ನಿವೃತ್ತರಾದವರು. ಶಿಕಾರಿಪುರದ "ಸರ್ವಜ" ಮತ್ತು ಮಂಗಳೂರಿನ "ಹೊಸದಿಗಂತ ಪತ್ರಿಕೆಗಳಲ್ಲಿ ಹವ್ಯಾಸಿ ಪತ್ರಕರ್ತನ ನೆಲೆಯಲ್ಲಿ ದಶಕದ ಸೇವೆ ಸಲ್ಲಿಸಿರುವ ಶಿಕಾರಿಪುರ ಈಶ್ವರಭಟ್ಟರು ಇದುವರೆಗೆ ನೂರಾರು ಲೇಖನ ಸಂದರ್ಶನಗಳನ್ನು ಮಾಡಿದ್ದು, ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉಡುಪಿಯಲ್ಲಿ ಜರುಗಿದ ವಿರಾಟ್ ಹಿಂದೂ ಸಮಾಜೋತ್ಸವದ ಸವಿನೆನಪಿಗಾಗಿ ಹೊರತಂದ “ಅಮೃತ ಸಿಂಧು" ...
READ MORE