ವಿದ್ವಾಂಸ ಡಾ. ಎಲ್. ಬಸವರಾಜು ಅವರು ಶರಣ ಅಲ್ಲಮಪ್ರಭುವಿನ ಶೂನ್ಯ ಸಂಪಾದನೆ ಕೃತಿಯನ್ನು ಸಂಪಾದಿಸಿದ್ದಾರೆ. 12ನೇ ಶತಮಾನದ ಶರಣ ಅಲ್ಲಮನು ಅಂದಿನ ಅನುಭಾವ ಮಂಟಪದ ಅಧ್ಯಕ್ಷರು. ಸರಳ ಜೀವನದ ಮೂಲಕವೇ ಜೀವನದ ಪರಮೋಚ್ಛ ಗುರಿಯಾದ ಮೋಕ್ಷವನ್ನು ಕಾಣಬೇಕು ಎಂಬುದು ಇಲ್ಲಿಯ ಸಂದೇಶ. ಶೂನ್ಯ ಸಂಪಾದನೆ ಗ್ರಂಥವು ಎಡೆಯೂರ ಸಿದ್ದಲಿಂಗೇಶ್ವರರ ರಚನೆ. ಈ ಗ್ರಂಥವು 12ನೇ ಶತಮಾನದ ಬಸವಾದಿ ಶರಣರು ಕಲ್ಯಾಣ ನಗರದಲ್ಲಿ ಅನುಭವ ಮಂಟಪದಲ್ಲಿ ಮಾಡಿದ ಅನುಭಾವ ಗೋಷ್ಟಿಯ ಆಗರ. ಶಿವಶರಣರ ವಚನ ಸಾಹಿತ್ಯದ ಸಮುದ್ರ ಮಂಥನ ಮಾಡಿದಾಗ ತೇಲಿಬಂದ ಅಮೃತವೇ ಶೂನ್ಯ ಸಂಪಾದನೆ ಎಂದು ಅರ್ಥೈಸಲಾಗುತ್ತದೆ.
ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...
READ MORE