ಹಿರಿಯ ಲೇಖಕಿ ಡಾ. ಶಕುಂತಲಾ ಸಿದ್ಧರಾಮ ದುರಗಿ ಅವರ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದ ಸಂಪಾದಿತ ಕೃತಿ.-ಕಥನ ಗೀತ ಮಾಲೆ. ಕಥನಗೀತೆ ಜನಪದ ಸಾಹಿತ್ಯದ ಪರಿಣಾಮಕಾರಿ ಪ್ರಕಾರ. ಇದರಲ್ಲಿ ಕಥಾಭಿರುಚಿ, ಗೇಯತೆಯ ಗುಣಗಳಿಂದಾಗಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ಇಂತಹ 55 ಕಥನಗೀತೆಗಳನ್ನು ಲೇಖಕಿಯು ಸಮರ್ಥ ವ್ಯಾಪಕ ಕ್ಷೇತ್ರಕಾರ್ಯ ಮಾಡಿ, ಸಂಗ್ರಹಿಸಿದ್ದಾರೆ. ಆಯ್ದುಕೊಂಡ ವಿಷಯದ ಕುರಿತು ಸುದೀರ್ಘವಾದ ಪ್ರಸ್ತಾವನೆ ಬರೆದಿದ್ದಾರೆ. ಅರ್ಥಪೂರ್ಣವಾದ ಪ್ರಾದೇಶಿಕ ಪದಕೋಶವಿದೆ. ಇಲ್ಲಿಯ ಸಂಗ್ರಹಕ್ಕನುಗುಣವಾಗಿ ವಿಭಾಗ ಕ್ರಮ ಅನುಸರಿಸಿದ್ದಾರೆ. ಹೀಗೆ ಹತ್ತು ಹಲವು ಶಾಸ್ತ್ರೀಯ ಸಂಪಾದನಾ ವಿಧಾನಗಳನ್ನು ಅನುಸರಿಸಿದ್ದಾರೆ. ಇದು ಕೇವಲ ಜನಪದ ಆಸಕ್ತರಿಗಷ್ಟೇ ಅಲ್ಲ, ಅಧ್ಯಯನ ಮಾಡಬೇಕೆನ್ನುವ ಯುವ ಪೀಳಿಗೆಗೆ ಕೂಡ ಪ್ರಯೋಜನವಾಗುತ್ತದೆ. ಮೌಖಿಕ ಪರಂಪರೆ ಅಳಿವಿನಂಚಿನಲ್ಲಿರುವಾಗ ಪುಸ್ತಕದಲ್ಲಿ ದಾಖಲಿಸಿ ಶಾಶ್ವತಗೊಳಿಸಿದ ಶ್ರೇಯಸ್ಸು ಲೇಖಕಿಗೆ ಸಲ್ಲುತ್ತದೆ.
ಲೇಖಕಿ ಡಾ. ಶಕುಂತಲಾ ಸಿದ್ಧರಾಮ. ದುರಗಿ ಅವರು ಮೂಲತಃ ಬಾಗಲಕೋಟೆಯವರು. ತಂದೆ ಶಿವಲಿಂಗಪ್ಪ ನಾವಲಗಿ, ತಾಯಿ ಪಾರ್ವತಮ್ಮ.ನಾವಲಗಿ. ಪ್ರಾಥಮಿಕ ಶಿಕ್ಷಣದಿಂದ ಪದವಿ ವರೆಗೆ ಬಾಗಲಕೊಟೆಯಲ್ಲಿ ಶಿಕ್ಷಣ ಪಡೆದು ನಂತರ, ಧಾರವಾಡದಿಂದ ಕರ್ನಾಟಕ ವಿವಿ ಯಿಂದ ಎಂ.ಎ, ನಂತರ ಗುಲಬರ್ಗಾ ವಿವಿಗೆ ‘ಆಧುನಿಕ ಕನ್ನಡ ಮಹಿಳಾ ಸಾಹಿತ್ಯ’ ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಲಭಿಸಿದೆ. ಕಲಬುರಗಿಯಲ್ಲಿಯ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥೆಯಾಗಿ, ಬೀದರನ ಬಿ.ವಿ. ಭೂಮರೆಡ್ಡಿ ಕಾಲೇಜು ಪ್ರಾಂಶುಪಾಲರಾಗಿ, ಈಗ (2001) ನಿವೃತ್ತರು, .ಗುಲಬರ್ಗಾ ವಿವಿ ಪಠ್ಯಪುಸ್ತಕ ಸಮಿತಿ ಸದಸ್ಯೆಯಾಗಿದ್ದರು. ಕೃತಿಗಳು-ಪ್ರಶಸ್ತಿಗಳು: ಮಗ್ಗಲು ಮನೆ ಅತಿಥಿ ...
READ MORE