ಖ್ಯಾತ ಲೇಖಕ ಪ್ರಕಾಶ ಗ. ಖಾಡೆ ಅವರು ಸಂಪಾದಿತ ಕೃತಿ ಬಾಗಲಕೋಟೆ ಹೋಳಿ. ಬಾಗಲಕೋಟೆ ಹೋಳಿ ಹಬ್ಬಕ್ಕೆ ತನ್ನದೇಯಾದ ಇತಿಹಾಸ ಮತ್ತು ಪರಂಪರೆ ಇದೆ. ಇಡೀ ದೇಶದಲ್ಲಿಯೇ ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ಬಿಟ್ಟರೆ ಐದು ದಿನಗಳ ಕಾಲ ನಡೆಯುವ ಬಾಗಲಕೋಟೆ ಹೋಳಿ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಈಗ ಗುರುತಿಸಿಕೊಂಡಿದೆ. ಬಾಗಲಕೋಟೆ ಹೋಳಿ ಕುರಿತು ಈವರೆಗೆ ಬಿಡಿ ಲೇಖನಗಳು ಮಾತ್ರ ಪ್ರಕಟವಾಗಿದ್ದವು. ಆದರೆ ಒಂದು ಪುಸ್ತಕವಾಗಿ ಲಭ್ಯವಿರಲಿಲ್ಲ ಈ ಕೊರತೆಯನ್ನು ‘ಬಾಗಲಕೋಟೆ ಹೋಳಿ : ಒಂದು ಸಾಂಸ್ಕೃತಿಕ ಅಧ್ಯಯನ’ ನೀಗಿಸುತ್ತದೆ.
ಪಾರಂಪರಿಕ ಸಂಗತಿಗಳನ್ನು ಕಟ್ಟಿಕೊಟ್ಟ ಈ ಕೃತಿಯಲ್ಲಿ ಅಮೂಲ್ಯ ಲೇಖನಗಳಿವೆ. ಪ್ರಖರ ಚಿಂತಕ ಅಣ್ಣ ರಾಮ ಮನಗೂಳಿ ಅವರ ದೀರ್ಘ ಮುನ್ನುಡಿ, ಹೇಮಾವತಿ ಎನ್. ಅವರ ಬೆನ್ನುಡಿ ಈ ಕೃತಿಗಿದೆ. ಖ್ಯಾತ ಕಾದಂಬರಿಗಾರ್ತಿ ಡಾ. ರೇಖಾ ಕಾಖಂಡಕಿ ಅವರು 'ಪ್ರಸನ್ನ ವೆಂಕಟದಾಸರು ಕಂಡ ಬಾಗಲಕೋಟೆ ಹೋಳಿ' ಲೇಖನ, ಶಾಂತಯ್ಯ ಪರಡಿಮಠರು ಬರೆದ "ಸೋಗಿನ ಬಂಡಿಗಳು', ರವಿರಾಜ ಗಲಗಲಿ ಅವರು ಬರೆದ" ಬಣ್ಣದ ಬಂಡಿಗಳು' ಮಹಾಬಳೇಶ್ವರ ಗುಡಗುಂಟಿ ಅವರ ಚರಿತ್ರಾರ್ಹ ಲೇಖನಗಳು ಹಾಗೂ ಅನೇಕ ಲೇಖಕರು ಬರೆದ ಲೇಖನಗಳು ಬಾಗಲಕೋಟೆ ಹೋಳಿ ಅಧ್ಯಯನಕ್ಕೆ ಅಮೂಲ್ಯ ಆಕರ ಒದಗಿಸುತ್ತವೆ.ಸ್ಮರಣೀಯ ಚಿತ್ರಗಳಿವೆ.
ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...
READ MORE