ಹಿರಿಯ ಸಾಹಿತಿ ಶಂಕರ ಅಜ್ಜಂಪುರ ಅವರ ‘ವೇದ ಪುರಾಣ’ ಎಂಬ ಕೃತಿಯು ಸನಾತನ ಸಂಸ್ಕೃತಿಯ ಮೂಲವಾದ ವೇದಗಳ ಸಂಹಿತೆಯ ವಿವರಗಳನ್ನು ಸರಳ ಕನ್ನಡದಲ್ಲಿ ಹೇಳಿರುವ ವಿಶೇಷವಾದ ಕೃತಿ. ವೇದಗಳ ಇತಿಹಾಸ, ವ್ಯಾಪ್ತಿ, ವಸ್ತು-ವಿಷಯ, ಸ್ವಾರಸ್ಯಗಳನ್ನು ಕುರಿತಂತೆ ಅನೇಕರಿಗೆ ಇರುವ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕೃತಿ ಸೂಕ್ತವಾಗಿದೆ. ಕೃತಿಕಾರರೇ ಹೇಳುವಂತೆ ಆರು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸದ್ದಿಲ್ಲದೆ ಪ್ರಾರಂಭವಾದ ‘ವೇದ ಪರಿಚಯ’ ಎಂಬ ಪೇಜ್, ದಿನಕಳೆಯುತ್ತಲೇ ಜನರಿಗೆ ತುಂಬಾ ಹತ್ತಿರವಾಗಿ ಬಿಟ್ಟಿತು. ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರಶ್ನೋತ್ತರ ರೂಪದಲ್ಲಿ ಬರೆಯುವುದನ್ನು ಆರಂಭಿಸಿದ ಜನರಿಗೆ ಸರಳ, ಸುಲಭ ವಿಧಾನದಲ್ಲಿ ವೇದಗಳ ಬಗೆಗೆ ತಿಳಿವಳಿಕೆ ನೀಡಲು ಸಾಧ್ಯವಾಗಿದೆ. ವೇದಗಳು ರಚಿಸಿದವರು ಯಾರು ?, ವೇದ-ಶಾಸ್ತ್ರ ಇವೆರಡರ ನಡುವಿನ ವ್ಯತ್ಯಾಸ, ವೇದಗಳು ಎಷ್ಟು ಪುರಾತನ, ಯಜುರ್ವೇದ ಸಂಹಿತೆ, ಸಾಮವೇದ ಸಂಹಿತೆಯ ಬಗೆಗಿನ ಮಾಹಿತಿ ಹೀಗೆ ಸಾಮಾನ್ಯ ಜನರಿಗೂ ವೇದದ ಸಂಪೂರ್ಣ ಜ್ಞಾನವನ್ನು ಧಾರೆ ಎರೆಯುವ ಲೇಖಕನ ಪ್ರಯತ್ನ ಇಲ್ಲಿ ಎದ್ದು ಕಾಣುವಂತಿದೆ.
ಲೇಖಕ ಶಂಕರ ಅಜ್ಜಂಪುರ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದವರು. ಬೆಂಗಳೂರು ವಿ.ವಿ. ಪದವೀಧರರು. ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಅಭಿವೃದ್ಧಿ ನಿಗಮ(ಎಲ್ ಅರ್ ಡಿ ಇ)ದಲ್ಲಿ ಮುದ್ರಣ ವಿಭಾಗದ ತಂತ್ರಜ್ಞಾನ ಅಧಿಕಾರಿಗಳಾಗಿ (2013) ನಿವೃತ್ತರು. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತಮಿಳು ಭಾಷಾ ಪ್ರವೀಣರು. ಮುದ್ರಣ ತಂತ್ರಜ್ಞಾನದಲ್ಲಿ ಪರಿಣಿತರು. ವಿದೇಶದಲ್ಲೂ ಈ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ. ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ಪರಿಸರ ಮತ್ತು ವಿಶಿಷ್ಟ ಪ್ರಾಣಿ-ಪಕ್ಷಿಗಳನ್ನು ಕುರಿತಂತೆ ಇವರು ಬರೆದ ಲೇಖನಗಳು ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಸೀತಾರಾಮ ಗೋಯೆಲ್ ಅವರ ‘Hindu society under seize’ ಕೃತಿಯನ್ನು ...
READ MORE