ಹಿಂದೂ ಮಕ್ಕಳಿಗೆ ಧರ್ಮ ಕುರಿತು ಏಕೆ ಅರಿವು ಮೂಡಿಸಬೇಕು ಎಂಬ ಜಿಜ್ಞಾಸೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಕೃತಿ-’ದೇವರು ನಂಬುವ’. ಈ ಕೃತಿಯು 1972ರಲ್ಲಿ ಮೊದಲ ಮುದ್ರಣ ಕಂಡಿತ್ತು. ಧರ್ಮ ಕಲಿಯಲು ಉತ್ಸಾಹಕ ಅಂಶವೆಂದರೆ ಅವರು ದೇವರಿದ್ದಾನೆ ಎಂದು ನಂಬುವುದು. ಈ ಕುರಿತು ಮಕ್ಕಳಿಗೆ ಹೇಳುವುದು ತಂದೆ-ತಾಯಿಯ ಕರ್ತವ್ಯ. ಇಂತಹ ವಿಷಯಗಳನ್ನು ಮನನ ಮಾಡಿಸುವುದರಿಂದ ಮಕ್ಕಳು ಸತ್ಪ್ರಜೆಗಳಾಗುತ್ತಾರೆ ಎಂಬ ಆಶಯದೊಂದಿಗೆ ಲೇಖಕರು ಕಥೆಗಳ ಮೂಲಕ ಧರ್ಮದ ಅಗತ್ಯ ಹಾಗೂ ಮಹತ್ವವವನ್ನು ಮನಗಾಣಿಸಲು ಇಲ್ಲಿ ಯತ್ನಿಸಿದ್ದಾರೆ.
ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. ...
READ MORE