`ಆನಂದ ಶಂಕರ’ ಗಿರಿಜಾ ಎಸ್ ದೇಶಪಾಂಡೆ ಅವರ ಕೃತಿಯಾಗಿದೆ. ಎಲ್ಲಾ ವಿದ್ಯಗಳಿಗೂ,ಧರ್ಮಕ್ಕೂ,ಧನಕ್ಕೂ ಇದೆ ಕಾರಣ ಎನ್ನುವಂತೆ ಪ್ರಸ್ತುತ ಆನಂದ ಶಂಕರದಲ್ಲಿ ಗಿರೀಜಮ್ಮನವರು 30 ಅಂಕಣ ಬರಹಗಳನ್ನು ಬರೆದಿದ್ದು ಧರ್ಮ ಗ್ಲಾನಿಯಾದಿಗ ಭಗವಂತನ ಅವತಾರ ಆಗುತ್ತದೆ ಎಂಬ ಗೀತೆಯ ವ್ಯಾಖ್ಯೆಯಂತೆ ಆದಿಗುರು ಶಂಕರರು ಸನಾತನ ಧರ್ಮದ ಉಳಿವಿಗಾಗಿ ಭಕ್ತಿಮಾರ್ಗದಲ್ಲಿ ನಡೆಯುವಂತೆ ಅನೇಕ ಶ್ಲೋಕಗಳನ್ನು ರಚಿಸಿ ಮನುಷ್ಯ ಜನ್ಮದ ಕುಲಕೋಟಿ ಉದ್ಧರಿಸಿದವರು.ಆದಿಗುರು ಶಂಕರ ಭಗವತ್ಪಾದರು ರಚಿಸಿದ ಸೌಂದರ್ಯ ಲಹರಿ ಲೋಕಪ್ರಸಿದ್ಧವಾದದ್ದು ದೇವಿಯ ವರ್ಣನೆ, ಅದರಿಂದ ಮನಸ್ಸಿಗೆ ಆಗುವ ಸಮಾಧಾನ.ಹಾಗೇ ಶಿವಾನಂದ ಲಹರಿಯಲ್ಲಿ ಪ್ರಕೃತಿ ಪುರುಷದ ಕುರಿತು ವಿವರವಾಗಿ ಹೇಳಿರುವುದನ್ನು ಅಂಕಣ ಬರಹರೂಪದಲ್ಲಿ ಸಾಧಕನಿಗೆ ಸಾಧನ ಮಾರ್ಗಸೂಚಿಯಂತೆ ಪ್ರಸ್ತುತ ಕೃತಿಯಲ್ಲಿ ಬರೆದಿದ್ದಾರೆ. ಈ ಕೃತಿಯಲ್ಲಿ ಅವರು ದೃಷ್ಟಾಂತಗಳನ್ನು ಸಹ ವಿವರಿಸಿದ್ದಾರೆ.ಧಾರ್ಮಿಕ ಕೃತಿಗಳಲ್ಲಿ ಗಿರೀಜ ಅಮ್ಮ ಅವರು ಬರೆದಿರುವ ಆನಂದ ಶಂಕರ ಕೃತಿ ಸಂಗ್ರಹದ ಜೊತೆಗೆ ಜ್ಞಾನದ ಸೌಂದರ್ಯವನ್ನು ಹೆಚ್ಚಿಸುವ ಕೃತಿಯಾಗಿದೆ.
ಲೇಖಕಿ ಗಿರಿಜಾ ಎಸ್. ದೇಶಪಾಂಡೆ ಅವರು ಮೂಲತಃ ಧಾರವಾಡ ಜಿಲ್ಲೆಯ ಶಿಗ್ಗಾವಿ ಊರಿನವರು. ಹಾವೇರಿಯಲ್ಲಿ ಬಿ.ಎ. ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಹಾಗೂ ಬಿ.ಇಡಿ ಪದವೀಧರೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರು. ಇವರು ಬರೆದ ಲೇಖನಗಳು, ಸಂದರ್ಶನಗಳು, ಪ್ರಬಂಧಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಂಗಳೂರಿನಲ್ಲಿ ವಾಸವಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಲೇಖಕಿಯರ ಸಂಘದ ಸದಸ್ಯರಾಗಿದ್ದಾರೆ. ಕೃತಿಗಳು: . ಸಂವಾದಿನಿ (32 ಮಹಿಳಾ ಸಾಧಕರ ಪರಿಚಯ), ಸಂಜೀವಿನಿ (ಆರೋಗ್ಯ ಲೇಖನಗಳು), ಜೇನುಗೂಡು (ಆತ್ಮಕಥೆ) ಪ್ರಶಸ್ತಿ-ಪುರಸ್ಕಾರಗಳು: ಡಿ.ಎಸ್.ಮ್ಯಾಕ್ಸ್ ಕನಸ್ಟ್ರಕ್ಶನ್ (2019) ಕಂಪನಿಯವರಿಂದ ರಾಜ್ಯೋತ್ಸವದಂದು ಶ್ರೇಷ್ಟ ಅಂಕಣ ಬರಹಗಾರ್ತಿ ಸಾಹಿತ್ಯಶ್ರೀ ಪ್ರಶಸ್ತಿ, ಕನ್ನಡ ...
READ MORE