ಅಮೇರಿಕದ ಚಿಕಾಗೋದ ಅನಿವಾಸಿ ಭಾರತೀಯ ಶ್ರೀ ಶ್ರೀಶೈಲಕುಮಾರ ಹಾದಿಮನಿ ಅವರ ಬಳಿಯಿದ್ದ ಉಮ್ಮತ್ತೂರು ದೂರ ವೀರನಂಜಾರ್ಯೊಡೆಯರವರು 1502ರಲ್ಲಿ ಸಂಕಲಿಸಿದ ಗುರು ಬಸವಣ್ಣನವರ 958 ಷಟ್ ಸ್ಥಲ ವಚನಗಳಿರುವ 294 ತಾಡೋಲೆಗಳ ಗರಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಡಿಜಿಟಲೀಕರಣದ ಈ ತಾಡೋಲೆ ಕಟ್ಟಿನಲ್ಲಿ ಮಹೇಶ್ವರ ಸ್ಥಲದ 214 ರಿಂದ 230 ರವರಿಗೂ ವಚನಗಳ ಗರಿಗಳು ಕಳೆದು ಹೋಗಿದೆ. ಪುಟಗಳ ಎಡಭಾಗದಲ್ಲಿ ವಚನಗಳಿರುವ ತಾಡೋಲೆ ಗರಿಯ ಚಿತ್ರ ಬಲಭಾಗದಲ್ಲಿ ಅದೇ ವಚನಗಳಿಗೆ ಹೊಸಗನ್ನಡದ ಲಿಪಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಕನ್ನಡ ಸಾಹಿತ್ಯದಲ್ಲಿಯೇ ಇದು ವಿನೂತನ ಪ್ರಯೋಗವಾಗಿದ್ದೂ, ಇದೇ ಮಾದರಿಯಲ್ಲಿ ಇತರ ಶಿವಶರಣರ ವಚನಗಳನ್ನು ಮಾಡುವ ಯೋಜನೆಯಿದೆ. ವಚನಸಾಹಿತ್ಯ ಶರಣಧರ್ಮದ ಧರ್ಮಗ್ರಂಥವಾಗಿದ್ದೂ, ಪ್ರಾಚೀನ ತಾಡೋಲೆ ರೂಪದಲ್ಲಿ ಈ ಗ್ರಂಥವನ್ನು ಮುದ್ರಿಸಲಾಗಿದ್ದೂ, ಹೊಸದಾಗಿ ಪ್ರಾಚೀನ ಲಿಪಿ ಅಭ್ಯಾಸ ಮಾಡುವವರಿಗೆ ಸಹಕಾರಿಯಾಗಲಿದೆ.
ಬಸವತತ್ವ ಪ್ರಚಾರ ಕಾಳಜಿಯ ಹಸ್ತಪ್ರತಿ ಸಂಗ್ರಹಕಾರ ಹಾಗೂ ಶರಣ ಸಂಶೋಧಕ ಅಶೋಕ ದೊಮ್ಮಲೂರು. ಎಂ ಕೃಷ್ಣಪ್ಪ ಮತ್ತು ತಾಯಿ ಶ್ರೀಮತಿ ಲಕ್ಷ್ಮಮ್ಮರ ಮಗನಾಗಿ 19 ಎಪ್ರಿಲ್ 1967 ರಲ್ಲಿ ಬೆಂಗಳೂರಿನ ದೊಮ್ಮಲೂರಿನಲ್ಲಿ ಜನಿಸಿಸಿದರು. ಮೂಲತಃ ಬಿಇ ಪದವಿದರ, ತಂತ್ರಜ್ಞಾನ ಉದ್ಯಮಿ. ಬಸವತತ್ವಗಳಲ್ಲಿ ಮೂಡಿದ ಆಸಕ್ತಿಯಿಂದ ತಮ್ಮ ಪೂರ್ವಾ ಶ್ರಮ ವೃತ್ತಿಯಿಂದ ಹೊರಬಂದು ಕಲಿತ ತಂತ್ರಜ್ಞಾನವನ್ನು ಶರಣ ಸಂಶೋಧನೆಗೆ ಮೀಸಲಿಟ್ಟಿದ್ದಾರೆ. ಶರಣ ಸಾಹಿತ್ಯ ಉಳಿಸಿ ಮುಂದಿನ ತಲೆಮಾರಿ ಕೊಂಡೊಯ್ಯವ ಕಾಯಕದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ವಚನತತ್ವಗಳ ಪ್ರಚಾರಕ್ಕೆ ಸಂಬಂಧಿಸಿ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ಇಲ್ಲಿಯವರೆಗೂ ...
READ MORE