`ಶ್ರೀರಾಮಚರಿತಾಮೃತಂ’ ಕೃತಿಯು ದೇರಾಜೆ ಸೀತರಾಮಯ್ಯ ಅವರ ಗ್ರಂಥವಾಗಿದೆ. ಶಿವರಾಮ ಕಾರಂತರು ಕೃತಿಯ ಕುರಿತು ಹೀಗೆ ಹೇಳುತ್ತಾರೆ; ಪಾತ್ರ ನಿರ್ವಹಣೆಯಲ್ಲಿ ಭಾವದ ಕಡೆಗೆ ಅವರ ಪರಮ ಲಕ್ಷ್ಯ ಸರಿಯುವುದರಿಂದ, ರಂಗಸ್ಥಳಕ್ಕೆ ಅಗತ್ಯವಾದ ಸ್ವರೋಚ್ಛಾರ, ಧ್ವನಿವಿಲಾಸ ಅವರಲ್ಲಿ ಕಂಡುಬರುತ್ತದೆ. ಯಾವ ಭಾವವೇ ಇರಲಿ, ಅದನ್ನು ಉಚಿತ ಧ್ವನಿಯೊಡನೆ ಬಿಂಬಿಸುವಾಗ ಅವರು ರಂಗಸ್ಥಳದಲ್ಲಿ ಅತ್ಯುಚ್ಛ ನಟನ ಯೋಗ್ಯತೆಯನ್ನು ಪ್ರಕಟಿಸುವುದು ಅವರ ವೈಖರಿ. ಈ ಗುಣದಲ್ಲಿ ಅವರನ್ನು ಮೀರಿಸುವವರಿಲ್ಲವೆಂದೇ ನಾನು ಎಣಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಿರಿಯ ಚಿಂತಕ-ಲೇಖಕ-ಪ್ರವಚನಕಾರ-ಯಕ್ಷಗಾನ ಕಲಾವಿದ ದೇರಾಜೆ ಸೀತಾರಾಮಯ್ಯ ಅವರು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದವರು. ಜಮೀನುದಾರರು. ತಂದೆ ಮಂಗಲ್ಪಾಡಿ ಕೃಷ್ಣಯ್ಯ, ತಾಯಿ ಸುಬ್ಬಮ್ಮ. ಯಕ್ತಗಾನ ಕಲಾವಿದರ ಮನೆತನ. ಪ್ರಾಥಮಿಕ ಶಾಲೆಯ ಗುರು ಕೊಟ್ಟೆಕಾಯಿ ನಾರಾಯಣ ರಾಯರ ಕುಮಾರವ್ಯಾಸ ಕುರಿತ ಪಾಠದಿಂದ ಅಭಿನಯ, ಸಾಹಿತ್ಯಾಸಕ್ತಿ ಮೂಡಿತು. ಯಕ್ಷಗಾನ, ತಾಳಮದ್ದಳೆ, ನಾಟಕ, ರಂಗಭೂಮಿಯ ಬಗ್ಗೆ ಸಂಶೋಧನೆ - ವಿಮರ್ಶೆಗಳು ಹೀಗೆ ವೈವಿಧ್ಯಮಯ ಸಾಹಿತ್ಯ ರಚಿಸಿದ್ದು ಇವರ ವೈಶಿಷ್ಟ್ಯ. ಬೆಳ್ಳಾರೆ ಗ್ರಾ.ಪಂ ಅಧ್ಯಕ್ಷರಾಗಿದ್ದರು. ಪುತ್ತೂರು ತಾಲೂಕು ಮಾರುಕಟ್ಟೆ ಸೊಸೈಟಿ ಅಧ್ಯಕ್ಷರು, ದಕ್ಷಿಣ ಕನ್ನಡ ಕೃಷಿಕರ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಕೃತಿಗಳು: ಭೀಷ್ಮಾರ್ಜುನ ...
READ MORE