‘ಭಕ್ತಿಸಾರ’ ಲೇಖಕಿ ಎ.ಸರಸಮ್ಮ ಅವರು ರಚಿಸಿರುವ ಭಕ್ತಿಗೀತೆಗಳ ಮಾಲಿಕೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಪ್ರಕಾಶಕರು ‘ನಾವು ತಿಳಿಯದೆ ಮಾಡಿದ ಪಾಪಗಳನ್ನು ಕಳೆದು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತ ಭಕ್ತಿ ಪಥದಲ್ಲಿ ಸಾಗಲೆಂದು ಆಶಿಸುತ್ತ ಭಗವಂತನ ನಾಮಸ್ಮರಣೆ ಮಾಡಿ ಆತನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಬಯಸಿ "ಭಕ್ತಿಸಾರ" ಎನ್ನುವ ಭಕ್ತಿಗೀತೆಗಳ ಮಾಲಿಕೆಯನ್ನು ರಚಿಸಿ ಭಗವಂತನ ಕೃಪೆಗೆ ಪಾತ್ರರಾಗಲು ಪ್ರೇರೇಪಿಸಿದ ಶ್ರೀಮತಿ ಎ. ಸರಸಮ್ಮನವರು ಕವನ ಸಂಕಲನ, ಕಥಾ ಸಂಕಲನ, ಚುಟುಕು ಸಂಕಲನ, ಸಾಮಾಜಿಕ ಕಾದಂಬರಿ, ಭಕ್ತಿ ಗೀತೆಗಳು, ನಾಟಕ ಹೀಗೆ ಸುಮಾರು ಮುವ್ವತ್ತು ಕೃತಿಗಳನ್ನು ರಚಿಸಿ ಸಾಹಿತ್ಯ ಸೇವೆಯನ್ನು ಮಾಡುತ್ತಿದ್ದಾರೆ. ಇವರ ಸಾಹಿತ್ಯ ಸೇವೆ ಹೀಗೆ ಮುಂದುವರಿಯಲು ಆ ಭಗವಂತನ ಅನುಗ್ರಹ ಸದಾ ಇವರ ಮೇಲೆ ಇರಲಿ ಎಂದು ಹಾರೈಸಿದ್ದಾರೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE