ಪ್ರೊ.ಎಸ್.ಎಲ್. ಶೇಷಗಿರಿರಾವ್ ಅವರು ಇಂಗ್ಲಿಷ್ನಲ್ಲಿ ರಚಿಸಿದ ಮಹಾಕಾವ್ಯ ಮಹಾಭಾರತವನ್ನು ಜಿ.ಎನ್. ರಂಗನಾಥರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಲ್ಕು ಸಂಪುಟಗಳಲ್ಲಿ ಅನುವಾದವಾಗಿರುವ ಶ್ರೀ ಮಹಾಭಾರತ ಕೃತಿಯಲ್ಲಿ ಇದು ಮೂರನೇ ಸಂಪುಟವಾಗಿದೆ.
ಇದರಲ್ಲಿ ಉದ್ಯೋಗ ಪರ್ವ, ಭೀಷ್ಮ ಪರ್ವ, ದ್ರೋಣ ಪರ್ವ, ಕರ್ಣ ಪರ್ವ, ಶಲ್ಯ ಪರ್ವ, ಸೌಪ್ತಿಕ ಪರ್ವ ಹಾಗೂ ಸ್ತ್ರೀ ಪರ್ವ ಒಟ್ಟು ಏಳು ಪರ್ವಗಳಲ್ಲಿ ಕತೆಗಳನ್ನು ರಚಿಸಿದ್ದಾರೆ.
ಉದ್ಯೋಗ ಪರ್ವದಲ್ಲಿ ವಿಶ್ವರೂಪ, ವೃತ್ರ, ಇಂದ್ರ ಮತ್ತು ನಹುಷರ ಕತೆ, ಬೇಡ ಮತ್ತು ಎರಡು ಪಕ್ಷಿಗಳ ಕತೆ, ಬೇಟೆಗಾರನ ಮತ್ತು ಜೇನುತುಪ್ಪದ ಕತೆ, ಕುಬೇರ ಮತ್ತು ಮುಚುಕುಂದರ ಕತೆ, ವಿದುಲ ಮತ್ತು ಅವಳ ಪುತ್ರನ ಕತೆ ಹಾಗೂ ಬೆಕ್ಕು ಮತ್ತು ದಿಂಡಿಕನ ಕತೆ ಇದೆ. ಕರ್ಣ ಪರ್ವದಲ್ಲಿ ಕಾಗೆ ಮತ್ತು ಹಂಸದ ಕತೆ, ಭಲಾಕನ ಕತೆ ಹಾಗೂ ಕೌಶಿಕನ ಕತೆ ಇದೆ. ಸ್ತ್ರೀ ಪರ್ವದಲ್ಲಿ ಅರಣ್ಯದಲ್ಲಿ ದಾರಿ ತಪ್ಪಿದ ಬ್ರಾಹ್ಮಣನ ಕತೆಯನ್ನು ಕೊಟ್ಟಿದ್ದಾರೆ.
ನಾಡಿನ ಖ್ಯಾತ ಪತ್ರಕರ್ತ, ಹಿರಿಯ ಲೇಖಕ ಜಿ.ಎನ್.ರಂಗನಾಥ ರಾವ್ ಮೂಲತಃ ಬೆಂಗಳೂರಿನ ಹಾರೋಹಳ್ಳಿಯವರು. 1942 ರಲ್ಲಿ ಜನಿಸಿದ ಅವರು, ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಮೈಲಿಗಲ್ಲುಗಳನ್ನು ನಿರ್ಮಿಸಿದ್ದಾರೆ. ಹೊಸಕೋಟೆ ಹಾಗೂ ಬೆಂಗಳೂರು ನಗರಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದ್ದ ಅವರು ’ನವರಂಗ’ ಕಾವ್ಯನಾಮದಿಂದ ಕೂಡ ಬರವಣಿಗೆ ಮಾಡಿದ್ದರು. ಅಲ್ಲದೇ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಕಾರ್ಯ ನಿರ್ವಹಿಸಿದ್ದ ರಂಗನಾಥ ರಾವ್ ಕಾದಂಬರಿ, ಸಣ್ಣಕತೆ, ನಾಟಕ, ಪ್ರಬಂಧ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ...
READ MOREಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ 2019