‘81 ಶಿವಕ್ಷೇತ್ರ ಹಾಗೂ ನವಗ್ರಹ ಪರಿಹಾರ ಕ್ಷೇತ್ರಗಳು’ ಲಲಿತಾ ಶೇಷಾದ್ರಿ ಅವರ ಕೃತಿಯಾಗಿದೆ. ಒಬ್ಬನೇ ಭಗವಂತನು ಭಕ್ತರನ್ನು ಅನುಗ್ರಹಿಸುವ ಸಲುವಾಗಿ ಅನೇಕ ರೂಪಗಳನ್ನು ಧರಿಸಿದ್ದಾನೆ. ಅನೇಕ ರೀತಿಯಲ್ಲಿ ಭಕ್ತರನ್ನು ಅನುಗ್ರಹಿಸಿ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಾನೆ. ಹಾಗಾಗಿಯೇ ಕಾಶಿಯಲ್ಲಿ ಶ್ರೀವಿಶ್ವೇಶ್ವರನನ್ನು ದರ್ಶಿಸಿದರೂ ರಾಮೇಶ್ವರದಲ್ಲಿ ರಾಮೇಶ್ವರನನ್ನು ದರ್ಶಿಸಿದರೂ ಒಬ್ಬನೇ ಭಗವಂತ ಅಲ್ಲಿ ವಿರಾಜಮಾನನಾಗಿದ್ದಾನೆ ಎಂಬ ಭಾವನೆಯು ನಮ್ಮ ಸನಾತನ ಧರ್ಮಾವಲಂಬಿಗಳಿಗೆ ಬರುತ್ತದೆ. ಇದು ನಮ್ಮ ಸನಾತನ ಧರ್ಮದ ವೈಶಿಷ್ಟ್ಯವಾಗಿದೆ. ನಮ್ಮ ದೇಶದಲ್ಲಿ ಅನೇಕ ಕ್ಷೇತ್ರಗಳಿದ್ದು ಅವುಗಳಲ್ಲಿ ಪ್ರಸಿದ್ಧವಾದ ಕೆಲವು ಕ್ಷೇತ್ರಗಳ ಪರಿಚಯವನ್ನು ಜನಸಾಮಾನ್ಯರಿಗೆ ಮಾಡಿಸಬೇಕೆಂಬ ಉದ್ದೇಶದಿಂದ ಶ್ರೀಮತಿ ಲಲಿತಾ ಶೇಷಾದ್ರಿ ಅವರು '81 ಶಿವ ಕ್ಷೇತ್ರಗಳು ಹಾಗೂ ನವಗ್ರಹ ದೋಷ ಪರಿಹಾರ ಕ್ಷೇತ್ರಗಳು ಎಂಬ ಗ್ರಂಥವೊಂದನ್ನು ರಚಿಸಿದ್ದಾರೆ. ಈ ಗ್ರಂಥವನ್ನವಲೋಕಿಸಿ ಜಗದ್ಗುರು ಮಹಾಸ್ವಾಮಿಗಳವರು ಸಂತೋಷಗೊಂಡಿದ್ದಾರೆ.
ಲಲಿತಾ ಶೇಷಾದ್ರಿ ಅವರು ಬೆಂಗಳೂರು ಉತ್ತರ ಲಯನ್ಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯ ಮೂಲಕ ಹಲವಾರು ದಶಕಗಳಿಂದ ಸಮಾಜಸೇವೆಯನ್ನು ಮಾಡಿದ್ದಾರೆ. ಅವರು ಸ್ವತಃ ಲೇಖಕಿಯಾಗಿದ್ದು ಹಲವಾರು ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಹಾಗೆಯೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 25 ವರ್ಷಗಳಿಂದ 'ಸೌಹಾರ್ದ ಕುಟುಂಬ ಸಲಹಾ ಕೇಂದ್ರದ ಸ್ಥಾಪಿತ ಅಧ್ಯಕ್ಷೆಯಾಗಿ ಮಹಿಳೆಯರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿರುತ್ತಾರೆ. ಹಲವಾರು ವರ್ಷಗಳಿಂದ ಅಂಗ ಕಾರುಣ್ಯ ಕೇಂದ್ರದ ಸದಸ್ಯೆಯಾಗಿ ಸುಮಾರು 10 ಸಾವಿರ ಜನಕ್ಕೆ ಕೃತಕ ಕಾಲು ಜೋಡಣೆಯಲ್ಲಿ ಸಹಾಯ ಮಾಡಿದ್ದಾರೆ. ಕೃತಿಗಳು: ಅಷ್ಡದಶಾ ಪೀಠಗಳು ...
READ MORE