ಸಾಮವೇದ ಒಂದು ಅಧ್ಯಯನ: ಲೇಖಕ ಶೇಷ ನವರತ್ನ ಅವರ ಕೃತಿ. ಭಾರತದಲ್ಲಿ ಶಾಸ್ತ್ರೀಯ ಸಂಗೀತದ ಬೇರು ಎಂದು ಸಾಮವೇದವನ್ನು ಪರಿಗಣಿಸಲಾಗುತ್ತದೆ. ನಾಲ್ಕು ಪ್ರಮುಖ ವೇದಗಳ ಪೈಕಿ ಸಾಮವೇದವು ಸಂಗೀತದ ಸ್ವರ-ಲಯ-ರಾಗಗಳ ಕುರಿತು ವಿವರಿಸುತ್ತಾದ್ದರಿಂದ ಇತರೆ ವೇದಗಳಿಗಿಂತ ಸಾಮವೇದವನ್ನು ಪ್ರತ್ಯೇಕ ಹಾಗೂ ವಿಶಿಷ್ಟ್ಯ ಎಂದು ಹೇಳಲಾಗುತ್ತದೆ. ಋಗ್ವೇದದ ಮಂತ್ರಗಳನ್ನು ಸ್ವರಬದ್ಧವಾಗಿ ಹಾಡುವಂತೆ ಮಾಡಿರುವುದೇ ಸಾಮವೇದ. ಪ್ರಕೃತಿಯಲ್ಲಿ ಲಯಬದ್ಧವಾದ ಒಂದು ಶಿಸ್ತು ಇದೆ. ಸ್ವರ ಇದೆ ಎಂದು ಹೆಚ್ಚಾಗಿ ತಿಳಿಸುವುದು ಸಾಮವೇದ. ಈ ವೇದದ ವೈಶಿಷ್ಟ್ಯ ಎಂದರೆ ನಾದ. ಅದನ್ನು ಹೇಗೆ ಉಚ್ಛರಿಸಿದರೂ ಭಗವಂತನಿಗೆ ಸೇರುತ್ತದೆ. ಸಂಗೀತದ ರಾಗಗಳು ಸಾಮವೇದದ ಜೀವಾಳ. ಈ ಕುರಿತು ವಿಸ್ತೃತ ಮಾಹಿತಿ ಒಳಗೊಂಡ ಕೃತಿ ಇದು.
ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು. ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ). ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...
READ MORE