`ಶ್ರೀ ಕೃಷ್ಣಾರ್ಪಣ ’ಗುರುರಾಜ ಪೋಶೆಟ್ಟಿಹಳ್ಳಿ ಅವರ ಕೃತಿಯಾಗಿದೆ. ಪರಂಪರೆಯ ಪ್ರವಕ್ತಾರ ಗುರುರಾಜ ಪೋಶೆಟ್ಟಿಹಳ್ಳಿರವರಿಂದ ಅಂದದಲ್ಲಿ ಸಂಕಲನಗೊಂಡಿದೆ. " ನಾರಾಯಣ -ಅವತಾರ ಚಿಂತನ"," ವಾಸುದೇವ -ಸ್ತೋತ್ರ ಮಂಥನ"," ಸಂಕರ್ಷಣ -ಅನುಷ್ಠಾನ ದರ್ಪಣ"," ಪ್ರದ್ಯುಮ್ನ -ಗುರು ನಮನ"," ಅನಿರುದ್ಧ -ಕ್ಷೇತ್ರ ದರ್ಶನ" ಎಂಬ ಐದು ಅಧ್ಯಾಯಗಳಲ್ಲಿನ 41ಲೇಖನಗಳಲ್ಲಿ ಜ್ಞಾನಮೂರ್ತಿ ಹಯಗ್ರೀವ, ಭವರೋಗ ವೈದ್ಯ- ಧನ್ವಂತರಿ, ಶ್ರೀರಾಮ, ಶ್ರೀಕೃಷ್ಣ, ತಿರುಪತಿ ತಿಮ್ಮಪ್ಪ, ಶ್ರೀಮಹಾಲಕ್ಷ್ಮಿ, ಶ್ರೀತುಲಸಿ,ಶಂಖ, ಸಾಲಿಗ್ರಾಮ, ಗೌರೀಶ, ಗರುಡ, ಗಣಪತಿ, ನವಗ್ರಹ ವಿಷ್ಣುಸಹಸ್ರನಾಮ, ಭಗವದ್ಗೀತೆ, ಗಜೇಂದ್ರಮೋಕ್ಷ, ಆದಿಶಂಕರಾಚಾರ್ಯ, ರಾಮಾನುಜಾಚಾರ್ಯ, ಆಚಾರ್ಯಶ್ರೀ ಮಧ್ವ, ಶ್ರೀಪಾದರಾಜ, ಶ್ರೀವ್ಯಾಸರಾಜ, ಪುರಂದರ- ಕನಕದಾಸರು, ಶ್ರೀಕಾಕೋಳು ಕ್ಷೇತ್ರ. ಹೀಗೆ ಭಗವಂತ, ಭಗವದ್ಭಕ್ತರು ಹಾಗೂ ಭಗವದ್ ಕ್ಷೇತ್ರಗಳನ್ನು ಪರಿಚಯಿಸಿದೆ. ಈ ಕೃತಿಯ ಓದುವಿಕೆಯಿಂದ ಪರಮಾತ್ಮ ಸಾನ್ನಿಧ್ಯ ಸುಖ ನಿಶ್ಚಿತವಾಗಿ ಸಿಗುತ್ತದೆ.
ಲೇಖಕ ಗುರುರಾಜ ಪೋಶೆಟ್ಟಿಹಳ್ಳಿ ಸಾತ್ವಿಕ ಸಾಹಿತ್ಯ ವಕ್ತಾರರೆಂದೇ ಗುರುತಿಸಿಕೊಂಡಿದ್ದಾರೆ. 1980ರಲ್ಲಿ ಜನಿಸಿದ ಅವರು ಪತ್ರಿಕೋದ್ಯಮ ಪದವಿ ಹಾಗೂ ಕನ್ನಡ ಎಂ.ಎ ಪೂರ್ಣಗೊಳಿಸಿದ್ದಾರೆ. ನೀತಿ ಆಯೋಗದಿಂದ ಮಾನ್ಯತೆ ಪಡೆದ ಐವಿಎಪಿಯಿಂದ ಇಂಡಾಲಜಿ-ಗಣಪತಿ ಕುರಿತು ವಿಶೇಷ ಅಧ್ಯಯನಕ್ಕೆ ರಾಜಮಾತಾ ಶ್ರೀಮತಿ ಪ್ರಮೋದಾದೇವಿ ಒಡೆಯರ್ ರಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸಂಸ್ಕೃತಿ ಚಿಂತಕರು, ಅಂಕಣಕಾರರೂ ಆಗಿರುವ ಗುರುರಾಜ ಪೋಶೆಟ್ಟಿಹಳ್ಳಿ ಅವರು ಮಾಧ್ಯಮ ಸಮಾಲೋಚಕ ಹಾಗೂ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದು, ಪ್ರಣವ ಮೀಡಿಯಾ ಹೌಸ್ ರೂವಾರಿಗಳಾಗಿದ್ದಾರೆ. ಪ್ರಕಟಿತ ಕೃತಿಗಳು: ಕನ್ನಡದ ಕಂಪಿನಲಿ ಕರಿವದನ, ಭಕ್ತಿ ಪಾರಿಜಾತ, ವಂದೇ ಗುರುಪರಂಪರಾಮ್’, ಅಡ್ವೈಸರ್ ಯೋಗ ವಿಶೇಷಾಂಕ 2018(ಅತಿಥಿ ...
READ MORE