ಶ್ರೀನಾರಾಯಣೋಪನಿಷತ್ -ಲೇಖಕ ಬಸವಾನಿ ರಾಮಶರ್ಮರು ದೇವ ನಾರಾಯಣನ ಮೂಲವನ್ನು ಕೊಟ್ಟು ಜತೆಗೆ ಅರ್ಥ ತಾತ್ಪರ್ಯಗಳನ್ನೂ ನೀಡಿರುವ ಕೃತಿ. 17 ಪುಟಗಳಷ್ಟಾದ ಈ ಕೃತಿ ಗಾತ್ರದಲ್ಲಿ ಕಿರಿದಾದರೂ ಸತ್ತ್ವ ಮತ್ತು ತತ್ತ್ವದಲ್ಲಿ ಮೌಲ್ಯಯುತವಾಗಿದೆ. ಈ ಕೃತಿಯನ್ನು ಪ್ರಣತಾರ್ತಿಹರನ್ ಸಂಪಾದಿಸಿದ್ದಾರೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE