ಸುಬ್ರಹ್ಮಣ್ಯ ಕ್ಷೇತ್ರದ 'ಓಂಕಾರ'ದ ಭೂಪಟವನ್ನು ನನ್ನ ಆಪ್ತ ಸ್ನೇಹಿತೆ ಶ್ರೀಮತಿ ಮಾಲಿನಿಕುಮಾರ್ ಕಳುಹಿಸಿದ್ದರು. ವಿಜ್ಞಾನಿಗಳ ತಂಡವೊಂದು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದಾಗ ದಕ್ಷಿಣ ಭಾರತದಲ್ಲಿರುವ ಸುಬ್ರಮಣ್ಯ ಕ್ಷೇತ್ರಗಳ 'ಓಂಕಾರ'ವನ್ನು ನೋಡಿದ ಅವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಕಾರಣ ಅದು ನನಗೆ ದೊರಕಿತು. ಆ ಭೂಪಟದಲ್ಲಿರುವ ಕ್ಷೇತ್ರಗಳ ಬಗ್ಗೆ ಓದುವ, ಬರೆಯುವ ಹಂಬಲ ಉಂಟಾಯಿತು. ತಮಿಳುನಾಡಿನಲ್ಲಿ ಪ್ರಮುಖವಾಗಿರುವ ಈ ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಆರುಪಡೆ ವೀಡುಗಳಯೆಂದು ಕರೆಯುತ್ತಾರೆ. ಪಳನಿ, ತಿರುಚಂದೂರ್, ಸ್ವಾಮಿಮಲೈ, ತಿರುತ್ತನಿ, ತ್ರಿಪುರಕುಂಡ್ರಂ, ಪಳಮುದಿರ್ ಚೋಲೈ, ಈ ಆರು ಕ್ಷೇತ್ರದಲ್ಲಿ ಸುಬ್ರಹ್ಮಣ್ಯನು ಸ್ಕಂದನಾಗಿ, ಕಂದನಾಗಿ, ಕಾರ್ತಿಕೇಯನಾಗಿ, ಮುರುಗನಾಗಿದ್ದಾನೆ. ಈ ಆರುಕ್ಷೇತ್ರಗಳ ಜೊತೆ ಕರ್ನಾಟಕದ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ, ಕುಕ್ಕೆ ಸುಬ್ರಹ್ಮಣ್ಯ ಕೇರಳದ ಹರಿಪಾಡ್ ಕ್ಷೇತ್ರಗಳ ಬಗ್ಗೆ ಅಧ್ಯಯನ ಮಾಡಿ ಬರೆದಿದ್ದೇನೆ ಎನ್ನುತ್ತಾರೆ ಲೇಖಕರು.
ಲಲಿತಾ ಶೇಷಾದ್ರಿ ಅವರು ಬೆಂಗಳೂರು ಉತ್ತರ ಲಯನ್ಸ್ ಕ್ಲಬ್ನ ಸ್ಥಾಪಕ ಅಧ್ಯಕ್ಷರಾಗಿದ್ದು ಈ ಸಂಸ್ಥೆಯ ಮೂಲಕ ಹಲವಾರು ದಶಕಗಳಿಂದ ಸಮಾಜಸೇವೆಯನ್ನು ಮಾಡಿದ್ದಾರೆ. ಅವರು ಸ್ವತಃ ಲೇಖಕಿಯಾಗಿದ್ದು ಹಲವಾರು ಧಾರ್ಮಿಕ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಹಾಗೆಯೇ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಅವರು ಕಳೆದ 25 ವರ್ಷಗಳಿಂದ 'ಸೌಹಾರ್ದ ಕುಟುಂಬ ಸಲಹಾ ಕೇಂದ್ರದ ಸ್ಥಾಪಿತ ಅಧ್ಯಕ್ಷೆಯಾಗಿ ಮಹಿಳೆಯರ ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸಿರುತ್ತಾರೆ. ಹಲವಾರು ವರ್ಷಗಳಿಂದ ಅಂಗ ಕಾರುಣ್ಯ ಕೇಂದ್ರದ ಸದಸ್ಯೆಯಾಗಿ ಸುಮಾರು 10 ಸಾವಿರ ಜನಕ್ಕೆ ಕೃತಕ ಕಾಲು ಜೋಡಣೆಯಲ್ಲಿ ಸಹಾಯ ಮಾಡಿದ್ದಾರೆ. ಕೃತಿಗಳು: ಅಷ್ಡದಶಾ ಪೀಠಗಳು ...
READ MORE