ಶ್ರೀಗುರು ವಚನಾಮೃತ

Author : ರೇವಣಸಿದ್ದಯ್ಯ ಹಿರೇಮಠ

Pages 100

₹ 120.00




Year of Publication: 2024
Published by: ಶ್ರೀ ಗಾನಯೋಗಿ ಡಾ ಪಂ.ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ (ರಿ) ಚಂದಾಪುರ ತಾ.ಚಿಂಚೋಳಿ.ಜಿ.ಕಲಬುರಗಿ.
Address: ಶ್ರೀ ಪುಟ್ಟರಾಜ ಕೃಪಾ ನಿಲಯ ಬಸವನಗರ ಚಂದಾಪುರ ತಾಲೂಕ ಚಿಂಚೋಳಿ ಜಿಲ್ಲೆ ಕಲಬುರಗಿ
Phone: 9448454696

Synopsys

ಗಾನಕೋಗಿಲೆ ಶ್ರೀ ರೇವಣಸಿದ್ದಯ್ಯ ಹಿರೇಮಠ' ಮಹತ್ವದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. 'ಸಾಹಿತ್ಯದೊಂದಿಗೆ ಸಂಗೀತ ಸೇರಿದರೆ ಚಿನ್ನದ ಹೂವಿಗೆ ಪರಿಮಳ ಬಂದಂತೆ' ಎಂಬ ಮಾತಿನಂತೆ ಸಂಗೀತ ಕ್ಷೇತ್ರದ ಅಸಾಮಾನ್ಯ ಸಾಧಕರಾದ ಶ್ರೀ ರೇವಣಸಿದ್ದಯ್ಯ ಹಿರೇಮಠರವರು ವೃತ್ತಿಯಲ್ಲಿ ಸಂಗೀತ ಶಿಕ್ಷಕರು, ಪ್ರವೃತ್ತಿಯಲ್ಲಿ ಅಪೂರ್ವ ಸಾಹಿತಿಗಳು. ಅಪಾರ ಲೋಕಾನುಭವವನ್ನು ಹೊಂದಿರುವಂತಹಇವರು 'ಗುರು ಪುಟ್ಟ ರಸಿಕಪ್ರಭು' ಅಂಕಿತದಲ್ಲಿ ಸಾಹಿತ್ಯ ಲೋಕಕ್ಕೆ ೧೫೫ ಆಧುನಿಕ ವಚನಗಳುಳ್ಳ 'ಶ್ರೀಗುರು ವಚನಾಮೃತ' ಎಂಬ ಮಹತ್ವದ ಹೊತ್ತಿಗೆ ಕನ್ನಡ ಸಾಹಿತ್ಯದ ಗಣಿಗೆ ಧಾರೆಯೆರೆದು ವಾಗ್ಗೇವಿಯ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ. ಹಸಿಗೋಡೆಯಲ್ಲಿ ಹರಳೊಗೆದಂತೆ ಇಲ್ಲಿನ ವಚನಗಳು ಪ್ರಖರ ವಿಚಾರಗಳಿಂದ ಗಮನಸೆಳೆಯುತ್ತವೆ. ಸುಂದರ ಸಮಾಜಕ್ಕಾಗಿನ ಹಿರೇಮಠರವರ ಪ್ರಾಂಜಲಭಾವ, ಕಾಳಜಿ ಅವರ ವಚನಗಳಲ್ಲಿ ಎದ್ದು ಕಾಣುತ್ತದೆ. ಮೊನಚಾದ ವಿಡಂಬನೆಯ ಮಾತುಗಳು ಎಂತಹ ದಪ್ಪ ಚರ್ಮದ ವ್ಯಕ್ತಿಯನ್ನೂ ಚುಚ್ಚಿ ಸನ್ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಪೂರಕವಾಗಿವೆ. ತಮ್ಮ ರಸವತ್ತಾದ ಜೀವನಾನುಭವಗಳನ್ನು ಆಧುನಿಕ ವಚನಗಳಲ್ಲಿ ದಾಖಲಿಸಿದ್ದಾರೆ.

About the Author

ರೇವಣಸಿದ್ದಯ್ಯ ಹಿರೇಮಠ
(01 June 1975)

ಲೇಖಕ ಶ್ರೀ ರೇವಣಸಿದ್ದಯ್ಯ ಹಿರೇಮಠ ಅವರು ಮೂಲತಃ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಪ್ರದೇಶದ ಕಲ್ಲೂರ ಗ್ರಾಮದವರು. 1975ರ 01 ಜೂನ್ ರಂದು ಜನನ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದರು. ನಂತರದಲ್ಲಿ ಗದುಗಿನ ಗಾನಯೋಗಿ ಸಾಹಿತ್ಯ ಸಂಗೀತ ಬ್ರಹ್ಮ ಗಾದೆ ಯೋಗಿ ಶಿವಯೋಗಿ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಗುರುಕುಲದ ಪದ್ಧತಿಯಲ್ಲಿ ಸುಮಾರು 12 ವರ್ಷಗಳ ಪರ್ಯಂತರ ಅವರ ಶಿಷ್ಯತ್ವ ವಹಿಸಿದರು. ಈ ವೇಳೆಯಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ಮಾತ್ರವಲ್ಲದೇ ವಿವಿಧರಂಗಗಳಾದ ನಾಟಕ, ಪುರಾಣ, ಪ್ರವಚನ, ಸಂಗೀತ, ಸಾಹಿತ್ಯ ,ವಿವಿಧ ಪ್ರಕಾರದ ಸಾಂಸ್ಕೃತಿಕ ಲೋಕದ ಸರದಾರರಾದರು. ಪ್ರಸ್ತುತ ಸಂಗೀತ ಶಿಕ್ಷಕರಾಗಿ ಸೇವೆ ...

READ MORE

Excerpt / E-Books

https://bookflow.in/books/ಶ್ರೀಗುರು-ವಾಚನಾಮೃತ/

Related Books