ಸಾಹಿತಿ ವಿದ್ವಾಂಸ ತಿ.ನಾ. ರಾಘವೇಂದ್ರ ಅವರ ಕೃತಿ-ಉಪನಿಷತ್ಸಾರ ಸಂಗ್ರಹ ಸಂಪುಟ-ಭಾಗ-1.ವೇದಾಂತ ಉಪನಿಷತ್ತುಗಳನ್ನು ಅರ್ಥೈಸಿಕೊಳ್ಳುವುದು ಜೀವ ಸಾರ್ಥಕತೆ ಹಾಗೂ ಧನ್ಯತಾ ಭಾವ ಮೂಡಿಸುತ್ತದೆ ಎಂಬ ಭಾವ ಜನಸಾಮಾನ್ಯರಲ್ಲಿದೆ. ಎಲ್ಲವನ್ನೂ ತಿಳಿದು ನಮ್ಮ ನಾವೇ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ? ಈ ಸ್ವ ಅರಿವು ನೀಡುವ ಜ್ಞಾನದ ಮೂಲವಾಗಿ ಉಪನಿಷತ್ತುಗಳಿವೆ. ತೀರಾ ಸರಳ ಭಾಷೆಯಲ್ಲಿ ಕೃತಿ ರಚಿಸಿದ್ದು, ಸಾಮಾನ್ಯ ಓದುಗರಿಗೆ ಭಾರತೀಯ ಸತ್ ಪರಂಪರೆಯನ್ನು ತಿಳಿಯಲು ಈ ಕೃತಿ ಸಹಕಾರಿ.
ವೃತ್ತಿಯಲ್ಲಿ ಎಂಜಿನಿಯರ್, ಪ್ರವೃತ್ತಿಯಲ್ಲಿ ಅಧ್ಯಾತ್ಮಿಕ ಅಧ್ಯಯನ. ಇವರ ಜನನ 1941ರ ಡಿಸೆಂಬರ್ 25. ಋಗ್ವೇದದ 10552 ಮಂತ್ರಗಳನ್ನೂ 8 ಸಂಪುಟ ಗಳಲ್ಲಿ ಮತ್ತು ವಿಷ್ನುಸಹಸ್ರನಾಮ , ಆತ್ಮವಾನ್ , ಈಶಾವಾಸ್ಯ ಉಪನಿಷತ್ , ತತ್ವಮಂಜರಿ , ಮೈಂಡ್ , ಮ್ಯಾಟರ್, ಎನರ್ಜಿ , ಮೈಂಡ್ ಅವರ್ ಡ್ರೈವರ್ , ಲಲಿತ ಸಹಸ್ರನಾಮ , ಮಹಾನಾರಾಯಣ ಉಪನಿಷತ್ , ಅಷ್ಟಾವಕ್ರ ಗೀತ , ಹೈಮ್ನ್ಸ್ ಆಫ್ ಪುರಂದರದಾಸ , ವಿದ್ಯಾಸ್ ಇನ್ ಭಗವದ್ಗೀತ ಮುಂತಾದ 20 ಪುಸ್ತಕಗಳು ಅಮೆಜಾನ್ ಹಾಗೂ ಕಿಂಡಲ್ ನಲ್ಲಿ ಪ್ರಕಟವಾಗಿವೆ . ಕನ್ನಡ ಭಾಷೆಯಲ್ಲಿ ವೇದ ಸಂವತ್ಸರ ಓಂಕಾರ ಪ್ರಕಾಶನದ ಮೂಲಕ ಪ್ರಕಟವಾಗಿದೆ . ನಮ್ಮ ಅಧ್ಯಾತ್ಮಿಕ ...
READ MORE