‘ಹಮೀದ್ ದಳವಾಯಿ ಮತ್ತು ಮಹರ್ಷಿ ವಾಲ್ಮೀಕಿ’ ಕೆ. ಸತ್ಯನಾರಾಯಣ ಅವರ ಒಂದು ಸಾಂಸ್ಕೃತಿಕ ವಾಚಿಕೆಯಾಗಿದೆ. ಹಲವು ಕಾರಣಗಳಿಗಾಗಿ ಇದೊಂದು ವಿಶಿಷ್ಟ ಪುಸ್ತಕ. ಇಲ್ಲಿ ಕತೆಗಳಿವೆ, ಪ್ರಬಂಧಗಳಿವೆ. ವ್ಯಕ್ತಿಚಿತ್ರವಿದೆ, ಪುಸ್ತಕ ಸಮೀಕ್ಷೆಯಿದೆ, ಸಾಮಾಜಿಕ, ರಾಜ- ಕೀಯ ವಿಶ್ಲೇಷಣೆ ಇದೆ. ಸಾಂಸ್ಕೃತಿಕ ಟಿಪ್ಪಣಿಗಳಿವೆ. ಈ ಎಲ್ಲ ಬರಹಗಳು ಒಂದು ರೀತಿಯ ಅಸಹಾಯಕತೆಯಿಂದ ಮೂಡಿದವು. ಸಾರಸ್ವತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ- ಬರೆಹಗಾರರಾದ ಕೆ ಸತ್ಯನಾರಾಯಣ ಅವರು ಅತ್ಯಂತ ಸಂಕೀರ್ಣವಾದ ವಿಷಯವೊಂದನ್ನು ಕೈಗೆತ್ತಿಕೊಂಡು, ಸಾಂಸ್ಕೃತಿಕ ಸಂವಾದಗಳೇ ಅಸಂಭವ ಎನಿಸುವಂತಹ ವರ್ತಮಾನದ ಸಂಕೀರ್ಣ ಕಾಲಘಟ್ಟದಲ್ಲಿ ಅದರ ಬಹು ಆಯಾಮಗಳನ್ನು ಓದುಗರ ಎದುರಿಗೆ ಇರಿಸಿದ್ದಾರೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE