ಹಣತೆ ಎಂದೂ ಮಾತನಾಡುವುದಿಲ್ಲ. ಆದರೆ ಅದು ತನ್ನ ಬೆಳಕಿನಿಂದ ತನ್ನ ಇರುವಿಕೆಯನ್ನು ಸಾರಿ ಹೇಳುತ್ತದೆ. ಅದರಂತೆ ಸಾಧಕರಾದವರು ಎಂದಿಗೂ ಮಾತನಾಡುವುದಿಲ್ಲ. ಅವರು ಮಾಡಿದ ಸಾಧನಗಳೇ ಮಾತನಾಡುತ್ತವೆ ಎನ್ನುವಂತೆ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಅಧ್ಯಾತ್ಮದ ಮೇರು ಸಾಧಕರು. ಅವರ ಪ್ರವಚನದ ಜಾಡು ಹಿಡಿದು ಹೊರಡುವುದೆಂದರೆ ಸಾಗರವನ್ನು ಬಿಂದಿಗೆಯಲ್ಲಿ ತುಂಬಿದಂತೆ. ಅಂತಹ ಅವರ ಅಸ್ಖಲಿತ ಪ್ರವಚನದ ಮೂಲಾಶಯಕ್ಕೆ ಭಂಗ ಬಾರದಂತೆ ಅದರ ಸಾರವನ್ನು ಹಿಡಿದಿಡುವುದು ಕಷ್ಟದ ಕೆಲಸ.
ಆದರೆ ಅದನ್ನು ಅಷ್ಟೇ ಸಲೀಸಾಗಿ ಈ ಕೃತಿಯಲ್ಲಿ ಸೆರೆ ಹಿಡಿಯಲಾಗಿದೆ ಮಾತ್ರವಲ್ಲ ಅವರು ಹೇಳುತ್ತಿದ್ದ ವಚನದ ಒಂದು ಎಳೆಯನ್ನೇ ಹಿಡಿದು ಪ್ರವಚನದ ಆರಂಭದಲ್ಲಿ ಒಂದು ವಚನ ಕೊನೆಯಲ್ಲಿ ಮತ್ತೊಂದು ವಚನ ಬಳಸಿರುವುದು ಈ ಕೃತಿಯ ವಿಶೇಷವಾಗಿದೆ. ನಾಡಿನ ಜಾನಪದ ತಜ್ಞ, ಶರಣ ಸಾಹಿತಿ ಗೊ.ರು.ಚನ್ನಬಸಪ್ಪ ಮುನ್ನುಡಿ ಬರೆದು ಅದನ್ನು ಮುಂಗಾಣಿಕೆ ಎಂದು ಕರೆದಿದ್ದಾರೆ. ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಬೆನ್ನುಡಿ ಬರೆದಿದ್ದಾರೆ.
ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ. ಶಹಾಪುರದ ಚರಬಸವೇಶ್ವರ ಪದವಿ ಪೂರ್ವ ಕಾಲೇಜು ಮತ್ತು ಬಾಪುಗೌಡ ದರ್ಶನಾಪುರ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಹವ್ಯಾಸಿ ಪತ್ರಕರ್ತ ಆಗಿದ್ದರು. ಸಂಜೆವಾಣಿ ಪತ್ರಿಕೆಯ ಶಹಾಪುರದ ವರದಿಗಾರರಾಗಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಪತ್ರಿಕಾ ವೃತ್ತಿಗೆ ...
READ MORE