ಕರ್ನಾಟಕದ ವಿಶೇಷ ಧಾರ್ಮಿಕ-ಪೌರಾಣಿಕ-ಐತಿಹಾಸಿಕ ತಾಣಗಳ ಕುರಿತು ಯಾತ್ರಿಕರಿಗೆ ಮಾಹಿತಿ ನೀಡುವ ಕೃತಿ-ನಾಡದೇಗುಲ. ಕೃತಿಯ ಕರ್ತೃ ಬಿ.ಎಸ್. ಪಾರಿಜಾತ ಮೋಹನ್. ನಾಡ ಗುಡಿಗಳು ಎಂಬ ಶೀರ್ಷಿಕೆಯಡಿ ಈಗಾಗಲೇ ಧಾರ್ಮಿಕ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಲೇಖಕಿ ಈಗ ‘ನಾಡ ದೇಗುಲ’ ಕೃತಿ ಬರೆದಿದ್ದು ಆಸಕ್ತ ಭಕ್ತರಿಗೆ ದೇಗುಲಗಳ ಐತಿಹಾಸಿಕ -ಧಾರ್ಮಿಕತೆಯ ಮಹತ್ವವವನ್ನು ತಿಳಿಯ ಪಡಿಸಿದ್ದಾರೆ. ನಾಡ ದೇಗುಲ ಕುರಿತು ತಿಳಿದುಕೊಳ್ಳ ಬಯಸುವವರಿಗೆ ಈ ಕೃತಿ ಉಪಯುಕ್ತ ಮಾಹಿತಿ ನೀಡುತ್ತದೆ.
ಬೆಂಗಳೂರು ನಿವಾಸಿ ಬಿ.ಎಸ್. ಪಾರಿಜಾತ ಮೋಹನ ಅವರು (ಜನನ: 26-01-1971) ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದಲ್ಲಿ ಎಂ.ಎ ಪದವೀಧರೆ. ತತ್ವಶಾಸ್ತ್ರ ಮತ್ತು ಜಾನಪದ ಸಾಹಿತ್ಯದಲ್ಲಿ ವಿಶೇಷ ಅಧ್ಯಯನ ಮಾಡಿದ್ದಾರೆ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿನಿಯೂ ಆಗಿದ್ದಾರೆ. ರೇಖಾಚಿತ್ರ ರಚನೆ, ಸಂಗೀತ, ನಾಟಕ, ಕಾರ್ಯಕ್ರಮ ನಿರೂಪಣೆಯಲ್ಲಿ ಆಸಕ್ತಿ. ವಿಜಯ ಕರ್ನಾಟಕ ದಿನಪತ್ರಿಕೆಯ ಲೈಫ್ ಸ್ಟೈಲ್, ವೆರೈಟಿ, ಫುಡ್ ಕೋರ್ಟ್, ಗಾರ್ಡನ್ ಟಿಪ್ಸ್ ವಿಭಾಗಗಳ ಅಂಕಣಗಾರ್ತಿ. ಇವರ ಲೇಖನ-ಕತೆ-ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು. ನಾಡಗುಡಿಗಳು ಹಾಗೂ ದೇಗುಲ ದರ್ಶನ-ಇವು ಪಾರಿಜಾತ ಅವರ ಕೃತಿಗಳು. ಪ್ರಶಸ್ತಿಗಳು: ನಾಡಪ್ರಭು ...
READ MORE