ಕರ್ನಾಟಕ ಪ್ರಕೃತಿ ವಿಕೋಪಗಳು-ಆತಂಕಗಳು

Author : ಡಾ. ಎನ್ ಯೆಲ್ಲಪ್ಪ ರೆಡ್ಡಿ

Pages 160

₹ 180.00




Year of Publication: 2025
Published by: ಜನ ಪ್ರಕಾಶನ
Address: ಜನ ಪ್ರಕಾಶನ, 54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ʻಕರ್ನಾಟಕ ಪ್ರಕೃತಿ ವಿಕೋಪಗಳು-ಆತಂಕಗಳುʼ ಡಾ. ಅ. ನ ಯಲ್ಲಪ್ಪ ರೆಡ್ಡಿ ಅವರ ಕೃತಿಯಾಗಿದೆ. ನೈಸರ್ಗಿಕ ಕಾಡುಗಳ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳ ರಕ್ಷಣೆ ಅವರ ಆಸಕ್ತಿಯ ಕ್ಷೇತ್ರ, ಪಶ್ಚಿಮ ಘಟ್ಟಗಳ ವಿಚಾರಕ್ಕೆ ಬರುವುದಾದರೆ ಭೂಮಿತಾಯಿಯ ಒಡಲನ್ನು ಬರಿದು ಮಾಡಿ, ಚರ್ಮ, ಮಾಂಸಗಳನ್ನು ಕಿತ್ತು ತಿನ್ನಲಾಗಿದೆ. ಅದರ ಪರಿಣಾಮ ವಾಗಿಯೇ ಬೆಟ್ಟಗುಡ್ಡಗಳು ಕುಸಿದು ಭೂಮಿತಾಯಿಯ ಕೆಂಪು ಬಣ್ಣದ ರಕ್ತವನ್ನು ಮಣ್ಣಿನೊಂದಿಗೆ ಸೇರಿ ಇಡೀ ಭೂಪ್ರದೇಶವೇ ಹಲವೆಡೆ ನೆಲಸಮವಾಗಿದೆ. ಸ್ವರ್ಗಸಮಾನವಾಗಿದ್ದ ಭೂಮಿತಾಯಿಯನ್ನು ನಮ್ಮ ರಾಜಕಾರಣಿಗಳು, ನಾಯಕರು, ಇಂಜಿನಿಯರುಗಳು, ಕಂಟ್ರಾಕ್ಟರುಗಳು ಹೇಗೆ ಹರಿದು ಹಂಚಿ ತಿಂದು ತೇಗಿದರು ಎಂಬುದು ಕರಾಳವೆನಿಸುವ ಅಧ್ಯಾಯ "ದ್ವೇಷ ಬೇಡ ಮಾನವೀಯತೆ ಮೆರೆಯಿರಿ, ಸಾಮೂಹಿಕ ವಿನಾಶವನು ತಡೆಗಟ್ಟಿ" ಎಂಬ ಲೇಖನದಲ್ಲಿ ಇದನ್ನೆಲ್ಲ ವಿವರವಾಗಿ ಹೇಳಲಾಗಿದೆ.

About the Author

ಡಾ. ಎನ್ ಯೆಲ್ಲಪ್ಪ ರೆಡ್ಡಿ
(07 February 1937)

ಡಾ. ಎನ್ ಯೆಲ್ಲಪ್ಪ ರೆಡ್ಡಿ ಅವರ ಆಸಕ್ತಿಯ ಕ್ಷೇತ್ರವೆಂದರೆ ನೈಸರ್ಗಿಕ ಕಾಡುಗಳ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟಗಳ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಸಸ್ಯಗಳ ರಕ್ಷಣೆ. ಅವರು ಭಾರತದ ಪಶ್ಚಿಮ ಘಟ್ಟಗಳ 150 ಕ್ಕೂ ಹೆಚ್ಚು ಸ್ಥಳೀಯ ಪ್ರಭೇದಗಳಿಗೆ ನವೀನ ನರ್ಸರಿ ತಂತ್ರಗಳನ್ನು ಅಭಿವೃದ್ಧಿಪಡಿಸಿದರು. ಪಶ್ಚಿಮ ಘಟ್ಟಗಳ ಅತ್ಯಂತ ಕ್ಷೀಣಿಸಿದ ಪ್ರದೇಶಗಳ ಪುನಃಸ್ಥಾಪನೆಗಾಗಿ ನವೀನ ಪರಿಸರ-ಪುನಃಸ್ಥಾಪನೆ ತಂತ್ರಜ್ಞಾನಗಳು ಮತ್ತು ಜೈವಿಕ-ತಂತ್ರಗಳನ್ನು ಅವರು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದರು ಮತ್ತು ಜಾರಿಗೆ ತಂದರು. ಸೂಕ್ತವಾದ ಪುಷ್ಟೀಕರಣ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೂಲ ಸ್ಥಳೀಯ ಸಸ್ಯವರ್ಗದ ಪ್ರದೇಶಗಳನ್ನು ಪುನರುಜ್ಜೀವನಗೊಳಿಸಿದರು. ಇದಲ್ಲದೆ, ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದಾಗ, ಅವರು ...

READ MORE

Related Books