ಮಕ್ಕಳ ಸಾಹಿತ್ಯ ಕುರಿತು ಅಪಾರ ಆಸ್ಥೆಯುಳ್ಳವರಾದ ಆನಂದ ಪಾಟೀಲ ಅವರು ರಚಿಸಿರುವ ಮಹತ್ವದ ಕೃತಿ ಇದು. ಪಾಶ್ಚಾತ್ಯ ಮಕ್ಕಳ ಸಾಹಿತ್ಯ ಕುರಿತ ಒಂದು ಸಮಗ್ರ ಚಿತ್ರವನ್ನು ಈ ಕೃತಿ ಕಟ್ಟಿಕೊಡುತ್ತದೆ. ಕೃತಿಯ ಬೆನ್ನುಡಿಯಲ್ಲಿ ಹೇಳಲಾಗಿರುವಂತೆ, ಭಾಷೆಯ ಅನುಕೂಲ, ಪುಸ್ತಕೋದ್ಯಮದ ಭರಾಟೆ, ಮಾರುಕಟ್ಟೆಯ ವಿಸ್ತೃತ ಜಾಲಗಳಿಂದ ಅನಾಯಾಸವಾಗಿಯೇ ದೊರಕಿಕೊಂಡಿರುವ ವಾತಾವರಣದಲ್ಲಿ, ಪಾಶ್ಚಾತ್ಯ ಮಕ್ಕಳ ಸಾಹಿತ್ಯ ತನ್ನ ಅಸ್ಮಿತೆಯನ್ನು ಗಾಢವಾಗಿಸಿಕೊಂಡಿರುವುದರ ಜೊತೆಗೆ, ಬಗೆಬಗೆಯ ವೈವಿಧ್ಯತೆಯನ್ನೂ ವಿಸ್ತಾರದ ಹರಹನ್ನೂ ಪಡೆದುಕೊಳ್ಳಲು ಸಾಧ್ಯವಾಗಿದೆ. ವಿದ್ವತ್ ಜಗತ್ತನ್ನು ಸೆಳೆಯುವಲ್ಲಿ ಅದು ಯಶಸ್ವಿಯಾಗಿದೆ. ಹಾಗಾಗಿ ಕನ್ನಡದಂಥ ಪರಿಸರದಲ್ಲಿನ ಮಕ್ಕಳ ಸಾಹಿತ್ಯಾಸಕ್ತರು ಅತ್ತ ಹೊರಳದೆ ಇರಲು ಸಾಧ್ಯವಾಗದು. ಆ ಬಗೆಯ ಒಂದು ಹೊರಳು ನೋಟವನ್ನು ಈ ಕೃತಿ ಹೇಳುತ್ತದೆ.
ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...
READ MORE