ಹಾಲು ಮೀಸಲು ಕೆ.ತಿಮ್ಮಯ್ಯ ಅವರ ರಚನೆಯ ಅಧ್ಯಯನ ಕೃತಿಯಾಗಿದೆ. ಜಾತ್ರೆ ಉತ್ಸವ, ಹಬ್ಬ ಹರಿದಿನ, ತೇರು ತಿರುನಾಳು ಅವುಗಳಿಗೆ ಸಂಬಂಧಿಸಿದ ಆಚರಣೆಗಳು, ಸಂಪ್ರದಾಯ, ನಂಬಿಕೆಗಳು ಅವುಗಳ ಹಿಂದಿನ ಉದ್ದೇಶ, ಆಶಯ ಅನುಸರಣೆ ಅನುಕರಣೆ ಇತ್ಯಾದಿ ಎಲ್ಲವೂ ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ. ಪ್ರತೀ ವಿಚಾರದಲ್ಲೂ ಕಾಡುಗೊಲ್ಲರು ಹಾಲು ಮತ್ತು ಮೀಸಲು ಪ್ರಜ್ಞೆಯನ್ನು ಬಯಸುತ್ತಾರೆ. ಹಾಲು ಮೀಸಲಿನಂತೆ ಶುದ್ಧತೆಯನ್ನು ಪಾವಿತ್ರ್ಯವನ್ನು, ಪಾರದರ್ಶಕತೆಯನ್ನು ಬಯಸುತ್ತಾರೆ. ಇದು ಹಾಳಾಗದಂತೆ ಇತರರನ್ನು ನಿರ್ಬಂಧಿಸಲು ಸಾಧ್ಯವಾಗದಿದ್ದಾಗ ತಮ್ಮನ್ನು ತಾವೇ ನಿರ್ಬಂಧಿಸಿಕೊಂಡಿದ್ದಾರೆ. ಹಾಗಾಗಿಯೇ ಈ ಕೃತಿಗೆ 'ಹಾಲುಮೀಸಲು' ಎಂದು ಕರೆಯಲಾಗಿದೆ. ಈ ಪದ ಕಾಡುಗೊಲ್ಲ ಸಂಸ್ಕೃತಿಯ ಅಂತಃಸತ್ತ್ವ ಮಾತ್ರವಲ್ಲ ಪ್ರಭಾವಳಿಯೂ ಆಗಿದೆ. ಇಡೀ ಸಂಸ್ಕೃತಿಯನ್ನು ಪ್ರಭಾವಿಸಿದೆ ಎಂದು ಪುದ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಕೆ. ತಿಮ್ಮಯ್ಯ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕಬಾಣಗೆರೆಯ ಮೇಗಳಹಟ್ಟಿಯವರು . ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಕನ್ನಡ ಎಂ.ಎ ಪದವಿಯನ್ನು ಪಡೆದ ಅವರು SET ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು.ನಂತರ ‘ಶಿರಾ ತಾಲ್ಲೂಕಿನ ಗ್ರಾಮದೇವತೆಗಳು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ 2004 ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ವೃತ್ತಿ ಬದುಕಿನ ಜೊತೆಗೆ ಪ್ರವೃತ್ತಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಇದುವರೆಗೆ ಇಪ್ಪತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವಾರು ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ವಿಚಾರ ಸಂಕಿರಣ, ಕಾರ್ಯಗಾರಗಳಲ್ಲಿ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದ್ದಾರೆ. ಅಧ್ಯಕ್ಷತೆ ...
READ MORE