ಡಾ. ಜಿ.ಬಿ. ಹರೀಶ್ ಅವರ ಕೃತಿ-ತಂತ್ರ ದರ್ಶನ. ಭಾರತೀಯ ಪ್ರಾಚೀನ ಶೈಕ್ಷಣಿಕ ಪರಂಪರೆಯಲ್ಲಿ ತಂತ್ರದರ್ಶನಗಳಿಗೆ ಬಹು ಮುಖ್ಯ ಸ್ಥಾನವಿದೆ. ತಂತ್ರವಿದ್ಯೆಗಳು ಜ್ಞಾನದ ಜಿಜ್ಞಾಸೆಗಳಾಗಿ, ವಿಶ್ವದೆಲ್ಲೆಡೆ ವಿದ್ವಾಂಸರ ಗಮನ ಸೆಳೆದಿವೆ. ತಂತ್ರಗಳು, ತಂತ್ರಗಳ ಪ್ರಕಾರಗಳು, ತಂತ್ರಗಳ ವಿಶ್ಲೇಷಣೆ ಇತ್ಯಾದಿ ವಿಷಯಗಳನ್ನು ಚಿಂತನೆಗೆ ಒಳಪಡಿಸುವ ಕೃತಿ ಇದು.
ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...
READ MORE