‘ಲಿಂಗತ್ವ ಸಮನ್ಯಾಯದೆಡೆಗೆ’ ಸಬಿಹಾ ಭೂಮಿಗೌಡ ಅವರ ಕೃತಿ. ಲಿಂಗ ಸಮಾನತೆ ಹಿನ್ನೆಲೆಯಲ್ಲಿ ಲಿಂಗತ್ವದ ಕುರಿತು ಆಳ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳ ಮೂಲಕ ಅಂಕಿ ಅಂಶಗಳನ್ನು ಕಲೆ ಹಾಕಿ ಈ ಮಹತ್ವದ ಕೃತಿಯನ್ನು ರಚಿಸಲಾಗಿದೆ. ಸ್ತ್ರೀತನವನ್ನು ಹೊಗಳುತ್ತಲೇ ಪುರುಷತ್ವದ ಕ್ರೌರ್ಯವನ್ನು ಹೇರಿಕೆ ಮಾಡುವ ಮೂಲಕ ಲಿಂಗ ಭಿನ್ನತೆಯನ್ನೇ ಹೇಗೆ ಅಸಮಾನತೆಗೆ ದಾರಿಯನ್ನಾಗಿಸಿಕೊಂಡಿದ್ದಾರೆ ಎಂಬ ಅಂಶಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
READ MOREಪುಸ್ತಕ ಪರಿಚಯ- ಕೃಪೆ- ಹೊಸತು
ಕ್ಷೇತ್ರಕಾರ್ಯದ ಮೂಲಕ ಮಾಹಿತಿ, ಅಂಕಿ- ಅಂಶಗಳನ್ನು ಕಲೆಹಾಕಿ ರೂಪಿಸಿರುವ ಕೃತಿಯಿದು. 'ಲಿಂಗ' ಭಿನ್ನತೆ ಎಂಬುದು ಸಹಜ. ಆದರೆ 'ಲಿಂಗತ್ವ' – ಎಂಬುದು ಒಂದು ಸಾಮಾಜಿಕ ರಚನೆಯಾಗಿದೆ – ಎಂಬ ತಾತ್ವಿಕತೆಯ ಮೂಲಕ ಅಧ್ಯಯನ ಕೈಕೊಂಡು ಹಲವಾರು ಮಹತ್ತ್ವದ ವಿಚಾರಗಳನ್ನು ಲೇಖಕಿ ಹೊರಹಾಕಿದ್ದಾರೆ. ಸ್ತ್ರೀತ್ವ ಮತ್ತು ಪುರುಷತ್ವ ಹೇರಿಕೆ, ಅದನ್ನಾಧರಿಸಿ ಜವಾಬ್ದಾರಿಯ ಹಂಚಿಕೆ, ಮಕ್ಕಳ ಲಾಲನೆ-ಪಾಲನೆಯ ಜವಾಬ್ದಾರಿ - ಹೀಗೆ ಅನೇಕ ಅಂಶಗಳ ಕುರಿತಾದ ಸಾಮಾಜಿಕ ಸ್ವರೂಪವನ್ನು ಇಲ್ಲಿ ವಿವರಿಸಲಾಗಿದೆ. ಲಿಂಗತ್ವದ ಅಸಮಾನತೆಯನ್ನು ತಿಳಿಸುತ್ತಲೇ, ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ, ಇದೇ ತಿಳುವಳಿಕೆ ಕಾರಣವೆಂದು ತರ್ಕಿಸಲಾಗಿದೆ.