ಹಿರಿಯ ಲೇಖಕ-ಚಿಂತಕ ಎಸ್. ಶ್ರೀಕಂಠಶಾಸ್ತ್ರೀ ಅವರ ಸಂಶೋಧನಾತ್ಮಕ ಲೇಖನಗಳ ಕೃತಿ ಇದು. ಈ ಬೃಹತ್ ಸಂಪುಟದಲ್ಲಿ ಒಟ್ಟು 115 ಲೇಖನಗಳಿವೆ. ಇತಿಹಾಸ, ಸಂಸ್ಕೃತಿ, ಕಲೆ-ವಾಸ್ತುಶಿಲ್ಪ, ಸಾಹಿತ್ಯ, ವಿಮರ್ಶೆಗಳು ಮುನ್ನುಡಿಗಳು - ಎಂಬ ಐದು ಭಾಗಗಳಲ್ಲಿ ಅಳವಡಿಸಲಾಗಿದೆ. ಈ ಲೇಖಕರ ಕೆಲವು ಲೇಖನಗಳು ಬಿಟ್ಟು ಹೋಗಿವೆ. ಮೊದಲು ಅಚ್ಚಾಗಿದ್ದ ಮೂಲಗಳಿಂದ ಅವನ್ನು ಸುಲಭವಾಗಿ ಸಂಗ್ರಹಿಸಲು ಸಿಕ್ಕದೇ ಹೋದುದು ಈ ಕೊರತೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಇಲ್ಲಿ ಲೇಖನಗಳು ಬೇರೆ ಬೇರೆ ವಿದ್ವತ್ಪತ್ರಿಕೆಗಳು, ದಿನಪತ್ರಿಕೆಗಳು, ಅಭಿನಂದನ ಮತ್ತು ಸಂಸ್ಮರಣ ಗ್ರಂಥಗಳಲ್ಲಿ ಪ್ರಕಟಗೊಂಡಿವೆ. ಲೇಖಕರ ಸೂಕ್ಷ್ಮ ಸಂಶೋಧನಾ ದೃಷ್ಟಿಗೆ ಇಲ್ಲಿಯ ಲೇಖನಗಳು ಸಾಕ್ಷಿ ನುಡಿಯುತ್ತವೆ.
ಡಾ. ಎಸ್. ಶ್ರೀಕಂಠ ಶಾಸ್ತ್ರೀ ( ಸೊಂಡೆಕೊಪ್ಪ ಶ್ರೀಕಂಠ ಶಾಸ್ತ್ರೀ) ಮೂಲತಃ ನಂಜನಗೂಡಿನವರು. ಆದರೆ, ಇವರ ಪೂರ್ವಜರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಸೊಂಡೆಕೊಪ್ಪದವರು. 1904ರ ನವೆಂರ್ 4 ರಂದು ಜನನ. ಸಿಡುಬು ರೋಗಕ್ಕೆ ತುತ್ತಾಗಿ ಎಡಗಣ್ಣು, ಎಡಗಿವಿಯ ಶಕ್ತಿ ಕಳೆದುಕೊಂಡಿದ್ದರು. ಕೋಲಾರದಲ್ಲಿ ಪ್ರೌಢಶಾಲೆವರೆಗೂ ಶಿಕ್ಷಣದ ನಂತರ ಮೈಸೂರಿನಲ್ಲಿ ಓದು ಆರಂಭ. 1935 ರಲ್ಲಿ ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿ 32 ವರ್ಷದ ನಂತರ ನಿವೃತ್ತಿ. ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್ ಕಲಿತಿದ್ದರು. ಇತಿಹಾಸ ತಜ್ಞರೆಂದೇ ಖ್ಯಾತಿ ಪಡೆದಿದ್ದರು. ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಲಂಡನ್ ನ ಪ್ರತಿಷ್ಠಿತ ...
READ MORE