‘ಅಭಿಗರ ಚೌಡಯ್ಯನವರ ವಚನಗಳು’ ಕೃತಿಯು ಸಿ.ಕೆ ನಾವಲಗಿ ಅವರ ಕೃತಿಯಾಗಿದೆ. ಅಂಬಿಗರ ಚೌಡಯ್ಯನವರು ಬಸವ ಸಮಕಾಲೀನ ದಿಟ್ಟಶರಣರು. ಹೆಸರೇ ಸೂಚಿಸುವಂತೆ ಮೀನು ಹಿಡಿಯುವುದು ಮತ್ತು ದೋಣಿ ನಡೆಸುವುದು ಅವರ ಕಾಯಕ. ವಚನಕಾರರಲ್ಲಿ ಪ್ರಮುಖರಾದ ಇವರು ಶ್ರೇಷ್ಠ ಅನುಭಾವಿಯಾಗಿ ತಮ್ಮ ವ್ಯಕ್ತಿ ವೈಶಿಷ್ಟ್ಯವನ್ನು ತೋರ್ಪಡಿಸಿಕೊಂಡವರು. ಇವರ ವಚನಗಳ ಭಾಷೆ ಸರಳ. ಇವರದು ನೇರನುಡಿ, ಚೌಡಯ್ಯನವರು ಶೋಷಿತ ವರ್ಗದಿಂದ ಬಂದವರಾದುದರಿಂದ ಸಾಮಾಜಿಕ ಚಿಂತನೆಯನ್ನು ವ್ಯಾಪಕವಾಗಿ ಮಾಡಿದ್ದಾರೆ, ಆಗಲೇ ದೊರೆತ ಇವರ 300 ವಚನಗಳಲ್ಲಿ ಬಹುತೇಕ ವಚನಗಳು ಕೆಳವರ್ಗದ ಬಂಡಾಯ ಮನೋಧರ್ಮವನ್ನೇ ಬಿಂಬಿಸುತ್ತವೆ ಎಂದಿದೆ. ಪ್ರಸ್ತುತ “ಅಂಬಿಗರ ಚೌಡಯ್ಯನವರ ವಚನಗಳು” – ಚೌಡಯ್ಯನವರ ಸಾಮಾಜಿಕ ಚಿಂತನೆಯನ್ನೊಳಗೊಂಡ 151 ವಚನಗಳನ್ನು ಆಯ್ದು ಸಂಗ್ರಹಿಸಿ ಜನಸಾಮಾನ್ಯರಿಗಾಗಿ ರೂಪಿಸಿದ ವಚನ ಸಂಕಲನ ಗ್ರಂಥ, ಪ್ರತಿ ವಚನದ ಸಂಕ್ಷಿಪ್ತ ವ್ಯಾಖ್ಯಾನದೊಂದಿಗೆ ಕಠಿಣ ಪದಗಳಿಗೆ ಅರ್ಥ ಕೂಡ ನೀಡಲಾಗಿದೆ.
ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...
READ MORE