ಲೇಖಕ ಸದ್ಯೋಜಾತ ಭಟ್ಟ ಅವರ ಕೃತಿ-ಶಿಲೆಗಳಲ್ಲಡಗಿದ ಸತ್ಯ. ಶಾಸನಗಳ ಅಧ್ಯಯನಕ್ಕೆ ಈ ಕೃತಿ ಪೂರಕ. ಶಾಸನಗಳ ಪಿತಾಮಹ ಚಪಡನನ್ನು ಪರಿಚಯ, ವೇದ ಪುರಾಣಗಳ ಸಾರ, ಶ್ಲೋಕಗಳಸರಳ ವಿವರಣೆ ಇವು ಕೃತಿಯ ಹೆಗ್ಗಳಿಕೆ. ಪ್ರಮುಖ ಸ್ತ೦ಭ , ತಾಮ್ರ ,ನಾಣ್ಯ , ಬಂಡೆ ಶಾಸನಗಳಲ್ಲಿನ ಸತ್ಯವನ್ನು ವಿವರಣೆ, ಬ್ರಾಹ್ಮೀ ,ಪ್ರಾಕೃತ , ಕನ್ನಡ, ಅರಾಮಿಕ್ ಲಿಪಿಗಳ ಕಾಲಮಾನ, ವ್ಯವಹಾರ ನೀತಿ , ಕಶ್ಯಪರು ಪ್ರಹ್ಲಾದನಿಗೆ ಬೋಧಿಸಿದ ನ್ಯಾಯದ ಮಹತ್ವ ಇಂತಹ ವಿಷಯಗಳನ್ನು ಈ ಕೃತಿ ಒಳಗೊಂಡಿದೆ.
ಲೇಖಕ, ಸಂಶೋಧಕ ಸದ್ಯೋಜಾತ ಭಟ್ಟ ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರು. ಕನ್ನಡ ಪಂಡಿತರಾದ ಅವರು ಶಾಸನಗಳ ಅಧ್ಯಯನ ಮತ್ತು ಶಾಸನಗಳ ಪದಕೋಶಗಳ ರಚನೆಯ ಜೊತೆಗೆ ಶಾಸನಗಳಲ್ಲಿ ಬಳಸಲ್ಪಟ್ಟ ಲಿಪಿಗಳ ಅಧ್ಯಯನ ನಡೆಸಿದ್ದಾರೆ. ಖರೋಷ್ಟಿ, ಬ್ರಾಹ್ಮಿ, ಶಾರದಾ, ನಾಗರೀ ನಂದಿನಾಗರೀ ಮತ್ತು ಕನ್ನಡ ಲಿಪಿಗಳ ಲಿಪ್ಯಂತರಣ. ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆರಂಭಗೊಂಡ ಪಾಲಿಯೋಗ್ರಾಫಿ ಮತ್ತು ಮ್ಯಾನ್ಯುಸ್ಕ್ರಿಪ್ಟಾಲಜಿಯಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ’ಶಿಲೆಗಳಲ್ಲಡಗಿದ ಸತ್ಯ’, ’ನಾಸತ್ಯಾ’ ಅವರ ಕೃತಿಗಳು. ’ಕಾಲಯಾನ’ ಅವರ ಇತ್ತಿಚಿನ ಕೃತಿ. ...
READ MORE