‘ಕರ್ನಾಟಕದ ಶಿಕ್ಷಣ ಪರಂಪರೆ’ ಕೃತಿಯು ಲೇಖಕಿ ಜ್ಯೋತ್ಸ್ನಾ ಕಾಮತ್ ಅವರು ಸಂಶೋಧನಾ ಗ್ರಂಥವಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಕಾಲದಿಂದ ಕಳೆದ ಶತಮಾನದವರೆಗೆ ಶಿಕ್ಷಣ ಕ್ರಮ ಏನಿದ್ದಿತು? ಯಾವ ಯಾವ ವಿಷಯಗಳಲ್ಲಿ ಶಿಕ್ಷಣ? ಧಾರ್ಮಿಕ ವ್ಯಾಸಂಗ, ಸೈನಿಕ ತರಬೇತಿ, ವೃತ್ತಿ ಪರ ಶಿಕ್ಷಣ ಮುಂತಾದ ಅಂಶಗಳಲ್ಲಿ ಅದಾವ ಪರಂಪರೆ ಇದ್ದಿತು? ಮಕ್ಕಳು-ಪ್ರೌಢರು, ಸ್ತ್ರೀಯರು, ಅನ್ಯ ಮತಗಳವರು ಎಂಬ ತಾರತಮ್ಯವನ್ನು ಯಾವ ರೀತಿಯಲ್ಲಿ ಪಾಲಿಸಲಾಗುತ್ತಿತ್ತು? ಇದೊಂದು ದೀರ್ಘ ಸಂಶೋಧನೆಯ ವಿಷಯವೇ. ಆದರೆ ಸರಾಗವಾಗಿ ಓದಿಸಿಕೊಂಡು ಹೋಗುವ ರೀತಿಯಲ್ಲಿ ಇಲ್ಲಿಯ ನಿರೂಪಣೆ ಇದೆ. ವಿಷಯವು ಚೆನ್ನಾಗಿ ವೇದ್ಯವಾಗಬೇಕೆನ್ನುವ ದೃಷ್ಟಿಯಿಂದ ಚಿತ್ರಗಳನ್ನು ಸೇರಿಸಲಾಗಿದೆ. 103 ವಿಚಾರ ಪ್ರಧಾನವಾದ 130 ಪುಟಗಳ ಪುಸ್ತಕಕ್ಕೆ ಇಷ್ಟೊಂದು ಚಿತ್ರಗಳನ್ನು ಸೇರಿಸ ಲಾಗಿದೆ. ಪ್ರತಿಯೊಂದು ಚಿತ್ರವೂ ನಮ್ಮ ಶಿಕ್ಷಣ ಕ್ರಮವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ. ಈ ಚಿತ್ರಗಳಿಂದಾಗಿಯೂ ಸುಭಗವಾದ ವಿವರಣೆಯಿಂದಾಗಿಯೂ ಈ ಕೃತಿಯು, ಸಾಮಾನ್ಯ ವಿದ್ಯಾವಂತರಿಗೂ ಶಿಕ್ಷಣ ವೃತ್ತಿಪರರಿಗೂ ಪ್ರಯೋಜನಕಾರಿಯಾಗಿದೆ.
ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...
READ MORE