ಡಾ. ನಾಗ ಎಚ್. ಹುಬ್ಳಿ ಅವರ ‘ಆದಿವಾಸಿ ಸಂಸ್ಕೃತಿ’ ಕೃತಿಗೆ ಡಾ. ಸ. ಚಿ. ರಮೇಶ ಅವರ ಬೆನ್ನುಡಿ ಬರಹವಿದೆ: ಕೃತಿಯ ಕುರಿತು ಬರೆಯುತ್ತಾ 'ಕಾಡು' ಆದಿವಾಸಿಗಳ ಸಂಸ್ಕೃತಿ ಬೇರು. ಆದರೆ ಕಾಡನ್ನು ಪ್ರೀತಿಸುತ್ತಲೇ ನಾಡನ್ನು ಪ್ರೀತಿಸಿದವರು ಆದಿವಾಸಿಗಳು ಎಂಬುದನ್ನು ನಾಗ ಹೆಚ್. ಹುಬ್ಬಿ ಅವರು ಈ ಕೃತಿಯಲ್ಲಿ ವರ್ಣಿಸಿದ್ದಾರೆ. ಪಶ್ಚಿಮ ಬಂಗಾಳ, ಬಿಹಾರ, ಛತ್ತೀಸಗಡ, ಉತ್ತರಪ್ರದೇಶ, ಒಡಿಸ್ಸಾ, ಅಂಡಮಾನ್-ನಿಕೋಬಾರ್, ಝಾರ್ಖಂಡ್ ಪ್ರದೇಶಗಳನ್ನು ಸುತ್ತಾಡಿ ವ್ಯಾಪಕ ಕ್ಷೇತ್ರಕಾರ್ಯದ ಮೂಲಕ ಆದಿವಾಸಿಗಳ ಜೀವನ ಶೈಲಿ, ಇತಿಹಾಸ, ಸ್ವಾತಂತ್ರ್ಯ ಹೋರಾಟ ಮತ್ತು ಸಂಸ್ಕೃತಿಯನ್ನು ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ. ಈ ಹೊತ್ತು ಉಪೇಕ್ಷಿತ ಕ್ಷೇತ್ರಗಳ ಕಡೆಗೆ ನಮ್ಮ ಅಧ್ಯಯನಕಾರರು ಗಮನಹರಿಸುತ್ತಿದ್ದಾರೆ. ಅಂಥ ಉಪೇಕ್ಷಿತ ಸಮುದಾಯವಾದ ಆದಿವಾಸಿಗಳ ಸಾಂಸ್ಕೃತಿಕ ಚರಿತ್ರೆಗೆ ಹೊಸ ಸೇರ್ಪಡೆಯಾಗಿ ಈ ಕೃತಿಯನ್ನು ರಚಿಸಿದ ನಾಗ ಎಚ್. ಹುಬ್ಳಿ ಇವರಿಗೆ ಕನ್ನಡ ವಿಶ್ವವಿದ್ಯಾಲಯದ ಅಭಿನಂದನೆಗಳು ಸಲ್ಲುತ್ತವೆ ಎಂದಿದ್ದಾರೆ.
ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...
READ MORE