ಕನಕದಾಸರು ಸಂಪ್ರದಾಯಸ್ಥ ಸಂಸ್ಕೃತಿಯೊಂದರ ವಿರುದ್ದದ ಪ್ರತಿಭಟನೆಯನ್ನುಅವರ ಕೀರ್ತನೆ ಮತ್ತು ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸುವ ಲೇಖಕರು, ಅವರನ್ನು ಮೇಲ್ವರ್ಣೀಯ ಜನರು ತಮ್ಮ ಸೂತ್ರದಲ್ಲಿ ಬಂಧಿಸಿಡುವುದನ್ನು ವಿರೋಧಿಸುತ್ತಾರೆ. ಸಾಮಾಜಿಕ ಚಳವಳಿಯನ್ನು ಪ್ರಾರಂಭಿಸಿ, ಸಾಮಾನ್ಯ ಜನರೊಂದಿಗೆ ಸಮಾನತೆಯ, ಸ್ಥಾನಮಾನದ ವಿಚಾರಗಳಿಗೆ ಹೋರಾಟಕ್ಕಿಳಿದು, ಜನಾಂಗಕ್ಕಾಗುತ್ತಿದ್ದ ನೋವು, ಅಪಮಾನ, ಬೇಸರ, ಕೀಳರಿಮೆಗಳನ್ನು ಭಕ್ತಿಯ ಆಚರಣೆಯಲ್ಲಿ ತೊಡಗಿಕೊಂಡೇ ಮಾನವೀಯ ಮೌಲ್ಯಗಳನ್ನು ಹೇಳುವ ಅನುಭಾವಿಯಾಗಿ ರೂಪುಗೊಂಡವರು ಕನಕದಾಸರು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ. ಏಳು ಅಧ್ಯಾಯಗಳನ್ನೊಳಗೊಂಡ ಈ ಕೃತಿ, ಕನಕದಾಸರ ಸಾಹಿತ್ಯ ಮತ್ತು ಚಳವಳಿಯ ಬೇರೆ ಬೇರೆ ಮಗ್ಗುಲುಗಳನ್ನು ಸ್ಪರ್ಶಿಸುತ್ತದೆ.
ಡಾ. ನರಸಿಂಹಮೂರ್ತಿ ಹೂವಿನಹಳ್ಳಿ ಅವರು ಹುಟ್ಟಿದ್ದು ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಐ.ಡಿ.ಹಳ್ಳಿ ಹೋಬಳಿಯ ಹೂವಿನಹಳ್ಳಿಯಲ್ಲಿ. ಕನ್ನಡದಲ್ಲಿ ಎಂ.ಎ ಪದವಿ ಪಡೆದು, ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ ಎಂಬ ವಿಷಯದಲ್ಲಿ ಮಹಾ ಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ವರಕವಿ ಬೇಂದ್ರೆ ಕಾವ್ಯಗಳ ಅಧ್ಯಯನ(ಲೇಖನಗಳು), ಮೌನದ ಸೆರಗು(ಕವಿತೆಗಳು), ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ(ತೌಲನಿಕ ಅಧ್ಯಯನ), ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ (ವಿಮರ್ಶಾ ಲೇಖನಗಳು), ದೇವರ ಜಾತ್ರೆ(ಕಾದಂಬರಿ), ಅರಿವಿನ ಕನ್ನಡಿ(ವಿಮರ್ಶಾ ಸಂಕಲನ), ...
READ MORE