ಸೃಜನಶೀಲ ಮತ್ತು ಸಂಶೋಧನಾ ಬರವಣಿಗೆಯೆರಡರಲ್ಲೂ ನುರಿತ ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಸಂಪಾದಕತ್ವದಲ್ಲಿ ಬಂದಿರುವ ಕೃತಿ ಇದು. ವಿಚಾರಸಂಕಿರಣದಲ್ಲಿ ಮಂಡಿತ ಪ್ರಬಂಧಗಳ ಈ ಸಂಪುಟ ಮಹತ್ವದ ಆಕರಗ್ರಂಥವಾಗಬಲ್ಲ ಸ್ವರೂಪದಲ್ಲಿದೆ. ಕನ್ನಡ ಸಾಹಿತ್ಯದಲ್ಲಿ ವಸಾಹತುಶಾಹಿ ಹೊತ್ತನ್ನು ಪ್ರತಿಭಟಿಸುವ ದನಿಗಳು ಹೇಗೆಲ್ಲಾ ವ್ಯಕ್ತವಾಗಿವೆ ಎಂಬುದಕ್ಕೆ ಈ ಕೃತಿ ಕನ್ನಡಿ ಹಿಡಿಯುತ್ತದೆ. ಈ ಪುಸ್ತಕಕ್ಕೆ ಬೆನ್ನುಡಿ ಬರೆದಿರುವ ಇತಿಹಾಸಕಾರ ಪ್ರೊ. ಎಂ. ಕೊಟ್ರೇಶ್, ಕನ್ನಡ ಶಿಷ್ಟ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಪ್ರಕಾರಗಳಾದ ಕಥೆ, ಕಾದಂಬರಿ, ಕಾವ್ಯ, ನಾಟಕ, ಹಾಡು, ಲಾವಣಿ, ಗೀಗೀಪದ, ಕಥನಗೀತೆ ಮುಂತಾದವುಗಳನ್ನು ಕೇಂದ್ರವಾಗಿಸಿಕೊಂಡುಬರೆದಿರುವ ಹಲವಾರು ಲೇಖನಗಳು ಬಹಳ ಗಂಭೀರವಾದ ಮತ್ತು ಮಹತ್ವಪೂರ್ಣವಾದವುಗಳಾಗಿ ಕಂಡುಬರುತ್ತವೆ. ಕರ್ನಾಟಕ ಹಾಗೂ ಕನ್ನಡ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಸ್ವಾಭಿಮಾನದ ಉಳಿವಿಗಾಗಿ ನಡೆದ ಹೋರಾಟದ ಅನನ್ಯತೆಯನ್ನು ಇಂದಿನ ಯುವಪೀಳಿಗೆ ಪರಿಭಾವಿಸುವ ಕ್ರಮವನ್ನು ಈ ಕೃತಿ ಮಂಡಿಸುತ್ತದೆ ಎಂದಿದ್ದಾರೆ.
ಲೇಖಕ ಡಾ. ಡಿ.ಕೆ. ಚಿತ್ತಯ್ಯ ಪೂಜಾರ್ ಅವರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ದವಡ ಬೆಟ್ಟಗ್ರಾಮದವರು. ದವಡಬೆಟ್ಟ, ಮಧುಗಿರಿ, ಚನ್ನಪಟ್ಟಣ, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, 1996-97 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವೀಧರರು. 2001ರಲ್ಲಿ ಡಾ.ಜಿ.ಆರ್. ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ‘ನಿಡುಗಲ್ಲು:ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧವನ್ನು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, ಡಾಕ್ಟರೇಟ್ ಪದವೀಧರರು. ಚಿತ್ತಯ್ಯ ಅವರು ಶಾಸ್ತ್ರೀಯ ಭಾಷೆಯಲ್ಲಿಅಧ್ಯಯನ ನಡೆಸಿದ್ದು, ಸೃಜನಶೀಲ ಮತ್ತು ಸಂಶೋಧನಾ ಬರಹಗಳಾಗಿ 29 ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ಅಕ್ಷರ ಮಂದಿರದ ಅಪೇಕ್ಷೆಯಂತೆ ಮಕ್ಕಳಿಗೆ ಮೀಸಲಾದ 50 ಪುಸ್ತಕಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಇವರಿಗೆ 2017ನೇ ಸಾಲಿನ ರಾಜ್ಯಮಟ್ಟದ ‘ಶ್ರೀವಿಜಯಾ ಸಾಹಿತ್ಯ ...
READ MORE