‘ಗೀತಮಾತೆಂಬ ಜ್ಯೋತಿ’ ಖ್ಯಾತ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ರಚಿಸಿರುವ ಕೃತಿ. ಈ ಕೃತಿಯು ಧಾರವಾಡದ ಪ್ರಖ್ಯಾತ ಹಿಂದುಸ್ತಾನಿ ಗಾಯಕಿ ಡಾ.ನಂದಾ ಪಾಟೀಲರ ಸಂಗೀತದ ಅಧ್ಯಯನವಾಗಿದೆ. ಗಾಯಕಿ ಪಾಟೀಲರು ಗ್ವಾಲಿಯರ ಮತ್ತು ಜಯಪುರ ಅತ್ರೌಲಿ ಘರಾಣಿಗಳಿಗೆ ಸೇರಿದವರು. ಅವರು ಪಂ. ನಾರಾಯಣರಾವ ಮುಜುಂದಾರರು ಬೆಳೆಸಿದ ಘರಾಣಿ ಗ್ವಾಲಿಯರ ಘರಾಣಿ ಮತ್ತು ಜಯಪುರ ಘರಾಣಿಯನ್ನು ಉತ್ತುಂಗಕ್ಕೇರಿಸಿದ ಪಂ. ಮಲ್ಲಿಕಾರ್ಜುನ ಮನ್ಸೂರ ಮುಂತಾದ ಹಿರಿಯ ಗಾಯಕರ ಪರಂಪರೆಯ ಕೊಂಡಿಯಾಗಿ ಪ್ರಾಧ್ಯಾಪಕಿಯಾಗಿ ವಿದ್ವಾಂಸರಾಗಿ ಹೆಸರು ಮಾಡಿದ್ದಾರೆ. ಈ ಕೃತಿಯಲ್ಲಿ ಡಾ. ನಂದಾ ಪಾಟೀಲರ ಜೀವನ, ಸಂಗೀತ ಸಾಧನೆ ಮತ್ತು ಅವರು ಹಿಂದುಸ್ತಾನಿ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಎಲ್ಲವನ್ನು ವಿಸ್ತೃತವಾಗಿ ವಿಶ್ಲೇಷಿಸಿದ್ದಾರೆ.
ಸಂಗೀತಗಾರ್ತಿ, ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ಮೂಲತಃ ರಾಯಚೂರಿನವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಳ ಗಾಯನ ಪರಂಪರೆ’ ವಿಷಯವಾಗಿ ಪಿಎಚ್ ಡಿ ಪದವೀಧರರು. ಸಂಗೀತದಲ್ಲಿ ವಿದ್ವತ್ ವಿಶಾರದ ಪದವೀಧರರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರು. ಜೈಪುರ ಗ್ವಾಲಿಯರ ಘರಾನಾ ಗಾಯಕಿ. ಕನ್ನಡ ಚಲನಚಿತ್ರಗಳ ಮೊದಲ ಸಂಗೀತ ನಿರ್ದೇಶಕಿ ಎಂಬ ಖ್ಯಾತಿ ಇವರದ್ದು. ರಾಗ-ಭೈರವಿ (2019) ಎಂಬುದು ಇವರು ಸಂಗೀತ ನಿರ್ದೇಶಿಸಿದ ಕನ್ನಡ ಚಲನಚಿತ್ರ. ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಡಾ. ರಾಜಶೇಖರ ಮನ್ಸೂರ, ಜಯಶ್ರೀ ಪಟ್ನೆಗರ್ ಅವರ ಶಿಷ್ಯೆ. ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್-ಸಂಗೀತ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿಯೂ ಕೆಲಸ ...
READ MORE