‘ಕನ್ನಡ ಸಂಶೋಧನೆಯ ಒಳನೋಟಗಳು’ ಡಾ. ವೆಂಕೋಬರಾವ್ ಎಂ. ಹೊಸಕೋಟೆ ಅವರ ಕೃತಿ. ಕೃತಿಯ ಕುರಿತು ತಿಳಿಸುತ್ತಾ ಆಧುನೀಕತೆಯಲ್ಲಿಂದು, ಸಂಶೋಧನೆಯ ಅಗತ್ಯವೇನು, ಸಂಶೋಧಕನಿಗಿರಬೇಕಾದ ಅರ್ಹತೆಗಳು ಯಾವುವು, ಸಂಶೋಧನೆಗೆ ಸಂಶೋಧಕ ಹೇಗೆ ಸಿದ್ಧಗೊಳ್ಳುವುದು, ಸಂಶೋಧನಾ ಸಂಸ್ಕೃತಿಯನ್ನು ಇರಿಸಿಕೊಂಡು ಪ್ರಾಮಾಣಿಕವಾಗಿ, ಕಷ್ಟಪಟ್ಟು, ಇಷ್ಟಪಟ್ಟು ಸಂಶೋಧನಾ ಪ್ರಬಂಧವನ್ನು ಬರೆಯುವುದು. ಹಾಗೆಯೇ ಸಂಶೋಧನಾ ಪಾಲಿಸಿಯನ್ನು ಮೈಗೂಡಿಸಿಕೊಂಡು , ನೈತಿಕತೆಯನ್ನು ಹೇಗೆ ಪಾಲಿಸಬೇಕು,ಸಂಶೋಧನಾ ವಿಧಿ-ವಿಧಾನಗಳನ್ನು ಬಳಸಿಕೊಂಡು, ಕಾರ್ಯ ಕ್ಷೇತ್ರವನ್ನು ಮಾಡುವುದರೊಂದಿಗೆ ಸಮಸ್ಯೆ, ವಿಶ್ಲೇಷಣೆ ಮತ್ತು ತೀರ್ಮಾನಗಳನ್ನು ನೀಡುವುದು ಹೇಗೆ, ಸಂಶೋಧನೆಯ ಬರವಣಿಗೆ ಹೇಗಿರಬೇಕು ಅದರ ಆಳ ಅಗಲಗಳನ್ನು ತಿಳಿದುಕೊಂಡು ಗುಣಾತ್ಮಕವಾಗಿ ಸಂಶೋಧನೆಯನ್ನು ಬರೆಯುವುದು ಹೇಗೆ, ಸಂಶೋಧನೆಗಾಗಿಯೇ ರೂಪಿತವಾದ ಸಂಸ್ಥೆಗಳು, ಸಂಶೋಧನಾ ಮುಖ್ಯಸ್ಥನ ವ್ಯಕ್ತಿತ್ವ ಹೇಗಿರಬೇಕು. ಸಂಶೋಧನೆಯ ಹಾದಿಯ ಅರಿವನ್ನು ಪಡೆಯುವುದು ಹೇಗೆ ಎಂಬುದನ್ನು ಆಧುನಿಕ ಕನ್ನಡ ಸಂಶೋಧನಾರ್ಥಿಗಳಿಗಾಗಿ ಸರಳವಾದ ಕೃತಿಯನ್ನು ಪ್ರೀತಿಯಿಂದ, ಕನ್ನಡ ಸಂಶೋಧನ ವಿದ್ಯಾರ್ಥಿಯಾಗಿ ಹಲವು ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಸ್ವ-ಅನುಭವವನ್ನು ಮೈಗೂಡಿಸಿಕೊಂಡು, ಸಂಶೋಧನಾರ್ಥಿಗಳಿಗಾಗಿ ರಚಿಸಿರುವ ಕನ್ನಡ ಸಂಶೋಧನಾ ಒಳನೋಟಗಳು ನಮ್ಮ ನಿಮ್ಮೆಲ್ಲರಿಗೂ ದಾರಿ ದೀಪವಾಗಲಿ ಎಂದಿದ್ದಾರೆ ಲೇಖಕ ವೆಂಕೋಬರಾವ್ ಎಂ. ಹೊಸಕೋಟೆ. ಈ ಕೃತಿ ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಮಾರ್ಗದರ್ಶನವಾಗಲಿದೆ.
ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರು ಕನ್ನಡದಲ್ಲಿ ಎಂ.ಎ, ತತ್ವಶಾಸ್ತ್ರದಲ್ಲಿ ಎಂ.ಎ, ಎಂ.ಎಡ್. ಎಂ.ಫಿಲ್ ಶಿಕ್ಷಣ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿಯನ್ನು ಪಡೆದಿದ್ದಾರೆ. ಸದ್ಯ ರಾಜಾಜಿನಗರದ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ- ಮುನಿದೇವರಾವ್ ಸಿ, ತಾಯಿ- ಅನುಸೂಯಬಾಯಿ ಎ. ವೃತ್ತಿಯೊಂದಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ತಲ್ಲಣ, ಒಡಲು, ಮತ್ತೆ ಆಮೇಲೆ ಇನ್ನೇನೂ, ಲಾಕ್ ಡೌನ್ ಋತುಮಾನ, ದಯವಿಟ್ಟು ನಂತರ ಪ್ರಯತ್ನಿಸಿ ಎಂಬ ಕಾದಂಬರಿಗಳು. ಮಿಂಚುಳ್ಳಿ, ಬೆಸುಗೆ, ಕಾಣದ ಕಡಲು, ಆಕಾಶದ ನೀಲಿಯಲ್ಲಿ, ಪ್ರೀತಿ ನೀನಿಲ್ಲದ ಮೇಲೆ ಎಂಬ ಕವನ ಸಂಕಲನಗಳು. ಅಂಚು, ಕಪ್ಪುನೆಲ, ಅಸ್ಮಿತೆಯ ...
READ MORE