ಪತ್ರಕರ್ತ ಪಿ. ಲಂಕೇಶ್ ರಾಜಕಾರಣವನ್ನು ನೋಡಿದ ಬಗೆ ಭಿನ್ನವಾದುದು. ’ನನ್ನ ಹಸಿದ ಹಲ್ಲಿಗೆ, ನಿಮ್ಮ ಮೈಸೂರು ಮಲ್ಲಿಗೆ’ ಎಂದು ಕವಿಗಳನ್ನು ಕಾಲೆಳೆದಂತೆಯೇ ರಾಜಕಾರಣವನ್ನು ತಮ್ಮ ಹದ್ದಿನ ಕನ್ಣಿನಿಂದ ನೋಡುತ್ತಿದ್ದರು. ಅವರ ಲೇಖನಿ ಎಂಬ ಅಡಕತ್ತರಿಗೆ ಸಿಗದ ಎರಡು ದಶಕಗಳ (೧೯೮೦-೨೦೦೦) ರಾಜಕಾರಣಿಗಳೇ ಇರಲಿಲ್ಲ.
ಪ್ರಜಾವಾಣಿ ಬಳಗದಲ್ಲಿರುವ ಪತ್ರಕರ್ತ ಕೆ. ರಾಘವೇಂದ್ರ ತೊಗರ್ಸಿ ಲಂಕೇಶರ ರಾಜಕೀಯ ನಿಲುವುಗಳು ಹಾಗೂ ಅವರ ಚಿಂತನಾಕ್ರಮವನ್ನು ಅವಲೋಕಿಸಿದ್ದಾರೆ.
ಲೇಖಕ ಕೆ. ರಾಘವೇಂದ್ರ ತೊಗರ್ಸಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿ ಕೆಲ ಮಾಡುತ್ತಿದ್ದು, ‘ಸಮೂಹ ಸಂವಹನ ಕನ್ನಡ’ ಎಂಬುದು ಮಾಧ್ಯಮ ವಿದ್ಯಾರ್ಥಿಗಳನ್ನು ಕೇಂದ್ರಿಕರಿಸಿ ಬರೆದ ಕೃತಿ. ‘ಲಂಕೇಶರ ರಾಜಕೀಯ ಟೀಕೆ-ಟಿಪ್ಪಣಿ’ (ಲಂಕೇಶರ ಅಂಕಣ ಬರಹಗಳ ಸಂಕಲನ). ...
READ MORE