‘ಉಡುಪಿ ಜಿಲ್ಲಾ ಬರಹಗಾರರ ಕೋಶ’ ಡಾ. ಅನಿಲ್ ಕುಮಾರ್ ಶೆಟ್ಟಿ ಅವರ ಸಂಶೋಧನಾ ಗ್ರಂಥವಾಗಿದೆ. ಉಡುಪಿಯಲ್ಲಿ 20ನೇ ಶತಮಾನದಲ್ಲಿ ನಡೆದ ಸಾಹಿತ್ಯಕ್ಷೇತ್ರದ ಚಟುವಟಿಕೆಗಳು ಮತ್ತು ಅವುಗಳ ಸಾಮಾಜಿಕ ಪರಿಣಾಮಗಳ ವಿಷಯದಲ್ಲಿ ಅಧ್ಯಯನ ಮಾಡಿ ಈ ಕೃತಿಯನ್ನು ಲೇಖಕರು ಹೊರತಂದಿದ್ದಾರೆ. ಅಷ್ಟೇಅಲ್ಲದೆ ಉಡುಪಿ ಜಿಲ್ಲೆಯ ಇತಿಹಾಸ, ಉಡುಪಿ ಜಿಲ್ಲೆಯ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ, ಶೆಟ್ಟಿಗಾರರು/ಸಾಲಿಗಾರರು, ಉಡುಪಿ ಜಿಲ್ಲೆಯಲ್ಲಿ ಸ್ವಾತಂತ್ಯ್ರ ಚಳುವಳಿ: ಸಾಮಾಜಿಕ ಕಾರಣ, ಶೈಕ್ಷಣಿಕ ಕಾರಣ, ರಾಜಕೀಯ ಕಾರಣಗಳು, ಉಡುಪಿ ಜಿಲ್ಲಾ ಸಾಹಿತ್ಯದ ವೈಶಿಷ್ಟ್ಯಗಳು/ಸ್ವರೂಪ, ಆಧುನಿಕ ಕಾಲದ ಕಾರ್ಕಳ ತಾಲೂಕು ವ್ಯಾಪ್ತಿಯ ಸಾಹಿತ್ಯರಚನೆಗಳು ಹೀಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದಂತಹ ಹಲವಾರು ವಿಚಾರಗಳು ಇಲ್ಲಿ ಪ್ರಸ್ತಾಪವಾಗಿದೆ.
ಲೇಖಕ, ಸಂಪಾದಕ ಡಾ. ಅನಿಲ್ ಕುಮಾರ್ ಶೆಟ್ಟಿ ಅವರು ಮೂಲತಃ ಕರಾವಳಿಯವರು. ದ.ಕ ಜಿಲ್ಲೆಯ ಪ್ರತಿಷ್ಠಿತ ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ, ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರದಲ್ಲಿ ಎಸ್.ಜಿ.ಎಂ ಸೇರಿದಂತೆ ನಾಲ್ಕು ಖಾಸಗಿ ಕಾಲೇಜು ಹಾಗೂ ಎರಡು ಸರಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದು ಇದೀಗ ತಮ್ಮನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃತಿಗಳು: ಉಡುಪಿ ಜಿಲ್ಲಾ ಬರಹಗಾರರ ಕೋಶ(ಕೈಪಿಡಿ) ...
READ MORE