‘ಕರ್ನಾಟಕ ದೇವದಾಸಿಯರ ಸಮಗ್ರ ಅಧ್ಯಯನ’ ಚೆನ್ನಣ್ಣ ವಾಲೀಕಾರ ಅವರ ಸಮಗ್ರ ಅಧ್ಯಯನ ಗ್ರಂಥವಾಗಿದೆ. ನಾಡಿನ ದೇವದಾಸಿಯರ ಸಮಸ್ಯೆಗಳನ್ನು ಹಾಗೂ ಹೀನ ಸಂಸ್ಕತಿಯೊಂದರ ಪೋಷಕರು ಸಮಾಜಕ್ಕೆ ನೀಡಿದ 'ದುರ್ದಾನವೊಂದರ ಅಧ್ಯಯನವನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಕವಿ, ಬರಹಗಾರ ಚೆನ್ನಣ್ಣ ವಾಲೀಕಾರ ಅವರು 1943 ಏಪ್ರಿಲ್ 6ರಂದು ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಜನಿಸಿದರು. ತಾಯಿ ಸಾಬಮ್ಮ, ತಂದೆ ಧೂಳಪ್ಪ. ಗುಲ್ಬರ್ಗದ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ.ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ವಾಲೀಕರ ಅವರು ರಾಯಚೂರು ಕಾಲೇಜಿನ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖ ಕೃತಿಗಳು: ಮರದ ಮೇಲಿನ ಗಾಳಿ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ...
READ MOREಹೊಸತು-2002- ಜನವರಿ
ನಾಡಿನ ದೇವದಾಸಿಯರ ಸಮಸ್ಯೆಗಳೆಲ್ಲ ಬೃಹದಾಕಾರ ತಾಳಿ ನಿಂತಂತೆ ಬೃಹದ್ದಂಥ ವೊಂದು ಹೊರಬಂದಿದೆ. ಜೊತೆಗೆ ಹೀನಾಯ ಪದ್ಧತಿಯ ದೆಸೆಯಿಂದ ನೊಂದ ಸೋದರಿಯರಿಗೆ ಹೊಸಬಾಳ ದಾರಿ ತೋರಬೇಕಾದ ಬೃಹತ್ ಜವಾಬ್ದಾರಿಯನ್ನೂ ಹೊರಿಸಿದೆ. ಇತಿಹಾಸವನ್ನು ಶೋಧಿಸುವಲ್ಲಿ ಡಾ|| ಚೆನ್ನಣ್ಣ ವಾಲೀಕಾರರು ತೋರಿದ ತಾಳ್ಮೆ-ಶ್ರಮ ಇಲ್ಲಿ ಎಷ್ಟು ಬಣ್ಣಿಸಿದರೂ ಕಡಿಮೆಯೆ. ಹೀನ ಸಂಸ್ಕೃತಿಯೊಂದರ ಪೋಷಕರು ಸಮಾಜಕ್ಕೆ ನೀಡಿದ ದುರ್ದಾನವೊಂದರ ಅದ್ಭುತ ಅಧ್ಯಯನ.