ಲೇಖಕ ಲಿಂಗದಹಳ್ಳಿ ಹಾಲಪ್ಪ ಅವರ ತೌಲನಿಕ ಅಧ್ಯಯನ ಕೃತಿ ʻಕನಕದಾಸರು ಮತ್ತು ಸರ್ವಜ್ಞʼ. ಕನಕದಾಸರು ಮತ್ತು ಸರ್ವಜ್ಞ ಇಬ್ಬರ ವಿಚಾರಗಳನ್ನು ಇಲ್ಲಿ ಚರ್ಚಿಸಲಾಗಿದೆ. ಕನಕದಾಸರು ಕುರುಬರಲ್ಲಿ ಜನಿಸಿದರೂ ಕುರುಬನಾಗಿ ಮುಂದುವರಿಯಲಿಲ್ಲ, ತಾಳ, ದಂಡಿಗೆ ಹಿಡಿದು ಹರಿನಾಮ ಸಂಕೀರ್ತನೆ ಮಾಡಿ ವೈಷ್ಣವ ಮತ ಅನುಯಾಯಿಯಂತೆ ಕಂಡರೂ, ಜನಿವಾರ ಧರಿಸಿ ಬ್ರಾಹ್ಮಣನಾಗದೆ ವಿಶ್ವಬಂಧು, ದಾರ್ಶನಿಕರಾಗಿ ನಿಂತವರು. ಸರ್ವಜ್ಞ ಕೂಡಾ ಮಾನವ ನಿರ್ಮಿತ ಜಾತಿ ಸಂಬಂಧಗಳನ್ನು ಅಲ್ಲಗಳೆಯುತ್ತಾನೆ. ಇನ್ನು, ಆಹಾರ ಸಂಸ್ಕೃತಿಯನ್ನು ಕುರಿತು ಹೇಳುವ ಸಂದರ್ಭದಲ್ಲೂ ಕನಕ ದಾಸರು ಮತ್ತು ಸರ್ವಜ್ಞ ಇಬ್ಬರೂ ಕೂಡಾ ಏಕ ರೂಪದ ನಿಲುವು ತಾಳಿದವರು. ಹೀಗೆ, ಇಬ್ಬರ ವಿಚಾರಗಳನ್ನು ಗಮನಿಸಿದರೆ ಇಬ್ಬರ ಉದ್ದೇಶವೂ ಒಂದೇ ಎಂದು ತಿಳಿಯುತ್ತದೆ. ಹೀಗೆ ಹಲವು ಅಂಶಗಳನ್ನು ಲಿಂಗದಹಳ್ಳಿ ಹಾಲಪ್ಪ ಅವರು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಜನನ ಮತ್ತು ವ್ಯಕ್ತಿತ್ವ, ಸಾಹಿತ್ಯ- ಚಿಂತನೆಯ ಸ್ವರೂಪ, ತೌಲನಿಕ ಅಧ್ಯಯನ: ಎರಡು ಸಾಹಿತ್ಯ ಮೌಲ್ಯಗಳ ಮುಖಾಮುಖಿ, ಕನಕದಾಸರು ಮತ್ತು ಸರ್ವಜ್ಞ: ಕನ್ನಡ ಓದುಗನ ಗ್ರಹಿಕೆ, ಹಾಗೂ ಪರಮರ್ಶನ ಗ್ರಂಥಗಳು ಶೀರ್ಷಿಕೆಗಳ ಲೇಖನಗಳಿವೆ.
ಕವಿ, ಕತೆಗಾರ ಡಾ. ಲಿಂಗದಹಳ್ಳಿ ಹಾಲಪ್ಪನವರು (ಜನನ: 1958 ಫೆಬ್ರುವರಿ 3ರಂದು) ಹಾವೇರಿ, ಸೂರತ್ಕಲ್ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದು, ಪ್ರಸ್ತುತ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ, ನಿವೃತ್ತರು. ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕಳೆದ 15 ವರ್ಷಗಳಿಂದ ಸಾಹಿತ್ಯ ಸಮಾಜ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಕೈಗೊಂಡು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದು, ಹಾಲುಮತ ದೈವಗಳ ಹುಟ್ಟು, ಇತಿಹಾಸ, ಆಚರಣೆ ಮತ್ತು ಸಂಪ್ರದಾಯ ಮುಂತಾದ ವಿಷಯಗಳು ಹೊಸ ಹೊಸ ಚಚೆ೯ಯನ್ನು ಹುಟ್ಟುಹಾಕಿವೆ. ಇವರ ಹಲವು ಕ್ರತಿಗಳನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಪಡಿಸಿದೆ. ಕೃತಿಗಳು: ಹಾಲುಮತದ ಹಿರಿಮೆ ...
READ MORE