ಸಮಕಾಲೀನ ಪ್ರಸ್ತುತತೆಯ ಸೋಗು ಅಥವಾ ಫ್ಲೋಗನ್ನುಗಳನ್ನು ಹಾಕದೆ ಕಂಬಾರರ 'ಚಕೋರಿ' ಒಂದು ದೊಡ್ಡ ಸಮಕಾಲೀನ ಅಗತ್ಯವನ್ನು ಪೂರೈಸುತ್ತದೆ. 'ಬಲ'ದ ಬಲಾತ್ಕಾರದ ಸಂಸ್ಕೃತಿಯ ವಿರುದ್ಧ ಶಕ್ತಿ ಸಂಸ್ಕೃತಿಯ ಸಾರ್ಥಕತೆಯನ್ನು ಸರ್ವರ ಮನಸ್ಸು ಮುಟ್ಟುವ ಹಾಗೆ ಸ್ವಾರಸ್ಯವಾಗಿ ಅಭಿವ್ಯಕ್ತಿಸಿದೆ. ಈ ಅಭಿವ್ಯಕ್ತಿಯನ್ನು ಸಾಧಿಸಿರುವುದು ಸಮಕಾಲೀನ ಜಗತ್ತಿನಲ್ಲಾಗಲೀ ಅಥವಾ ಸಮಕಾಲೀನ ಜಗತ್ತಿನ ನಿರ್ಮಾತೃ ಪ್ರತಿನಿರ್ಮಾತೃಗಳು ತಯಾರಿಸಿರುವ ಭವಿಷ್ಯದ ನೀಲನಕಾಶೆಗಳಲ್ಲಿ ಇಲ್ಲದ 'ಅಂದಿಂಗೆ ಹಳೆಯ'ವಾದರೂ 'ಇಂದಿಂಗೆ ಎಳೆಯ'ವಾಗಿರುವ ಕನಸಿನ ಮೂಲಕ. ಕಂಬಾರರ 'ಚಕೋರಿ' ತನ್ನ ಸ್ವರೂಪದಲ್ಲಿ, ಈ ಶತಮಾನದ ಇತರ ಮಹಾಕಾವ್ಯಗಳಿಗಿಂತ ಭಿನ್ನವಾಗಿದೆ. ಅದರ ಭಾಷೆಯ ಸ್ವರೂಪ ಲಯಬದ್ಧ ಏರಿಳಿತಗಳನ್ನು ಒಳಗೊಂಡ ಸಮುದ್ರದ ಮೇಲೆಯಂತೆ ಮೇಲುನೋಟಕ್ಕೆ ಶಾಂತವಾಗಿ ಕಂಡರೂ ಆಸ್ಫೋಟಕ ಶಕ್ತಿಯನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಹಳೆಯ ಚಂಪೂ ಪ್ರಕಾರಕ್ಕೆ ಹೊಸ ರೂಪ ಮತ್ತು ಶಕ್ತಿಗಳನ್ನು ಕಂಬಾರರು ನೀಡಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE