'ಗೋದಾವರಿವರಂ ಇರ್ದ ಕನ್ನಡ ನಾಡು’ ಜಿ. ಎನ್. ಉಪಾಧ್ಯ ಅವರ ಶಾಸನಗಳ ಅಧ್ಯಯನವಾಗಿದೆ. ಗೋದಾವರಿವರೆಗೆ ಹಬ್ಬಿದ್ದ ಕನ್ನಡ ನಾಡಿನ, ಕನ್ನಡಿಗರ ಓರಿಮೆಗಳನ್ನು ಕುರಿತು ಸಾಕ್ಷಿ ಹೇಳುವಂಥ ಶಾಸನಗಳ ಅಫೂರ್ವ ಅಧ್ಯಯನ ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಸನಗಳನ್ನು ವಿಸ್ತಾರವಾಗಿ ಅಭ್ಯಾಸಮಾಡಿರುವ ಅಧ್ಯಯನವಾಗಿದೆ.
ಜಿ.ಎನ್. ಉಪಾಧ್ಯ ಮೂಲತಃ ಉಡುಪಿ ತಾಲೂಕಿನ ಕೋಟದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ ಪಡೆದ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ವರದರಾಜ ಆದ್ಯ ಬಂಗಾರದ ಪದಕ ಹಾಗೂ ಮೊದಲ ರ್ಯಾಂಕ್ನೊಂದಿಗೆ ಗಳಿಸಿಕೊಂಡರು. ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ಸಾಂಸ್ಕೃತಿಕ ಅಧ್ಯಯನ, ವಿಮರ್ಶೆ, ಭಾಷಾ ವಿಜ್ಞಾನ ಮತ್ತು ಪತ್ರಿಕೋದ್ಯಮ ಅವರ ಆಸಕ್ತಿಯ ಕ್ಷೇತ್ರಗಳು. 'ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಅವರು ಕೆಲವು ವರ್ಷ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಸೊಲ್ಲಾಪುರ ಒಂದು ಸಾಂಸ್ಕೃತಿಕ ಅಧ್ಯಯನ, ಮಹಾರಾಷ್ಟ್ರದ ಕನ್ನಡ ಶಾಸನಗಳ ...
READ MOREಹೊಸತು-ಆಗಸ್ಟ್-2002
ಕನ್ನಡ ನಾಡು ಅಪೂರ್ವ ಅಧ್ಯಯನ. ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಸನಗಳನ್ನು ವಿಸ್ತಾರವಾಗಿ ಅಭ್ಯಾಸ ಮಾಡಿ, ಅಂದಿನ ಸಮಗ್ರ ಕರ್ನಾಟಕದ ಒಂದು ನೋಟವನ್ನು ನಮ್ಮ ಕಣ್ಮುಂದೆ ತಂದು ನಿಲ್ಲಿಸಲಾಗಿದೆ. ರಾಜಕೀಯ - ಐತಿಹಾಸಿಕ - ಜನಜೀವನ ಇವುಗಳ ಮೇಲೆ ಈ ಸಂಶೋಧನೆ ಅಪಾರ ಬೆಳಕು ಬೀರಿದೆ.